Connect with us

LATEST NEWS

ಮೂಡನಂಭಿಕೆಯ ಪರಮಾವಧಿ, ಶಾಲಾ ಅಭಿವೃದ್ದಿಗೆ 11 ವರ್ಷದ ವಿದ್ಯಾರ್ಥಿಯ ಬಲಿ ನೀಡಿದ ಆಡಳಿತ ಮಂಡಳಿ..!

ಹತ್ರಾಸ್ :  ಶಾಲೆಯ ಏಳಿಗೆಗಾಗಿ 11 ವರ್ಷದ ವಿದ್ಯಾರ್ಥಿಯನ್ನು ಬಲಿ ನೀಡಿದ ಹೇಯಾ ಕೃತ್ಯ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ.  ಹೇಯಾ ಕೃತ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಶಾಲೆಯ ಮಾಲಕ, ನಿರ್ದೇಶಕರು, ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಬಲಿಯಾದ ವಿದ್ಯಾರ್ಥಿಯನ್ನು ಡಿಎಲ್ ಪಬ್ಲಿಕ್ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ಕೃತಾರ್ಥ್ (11) ಎಂದು ಗುರುತಿಸಲಾಗಿದೆ.  ಇಲ್ಲಿನ ಡಿಎಲ್ ಪಬ್ಲಿಕ್ ಸ್ಕೂಲ್ ಮಾಲಕ ಜಸೋಧನ್ ಸಿಂಗ್ ಅವರು ಮೂಢನಂಬಿಕೆಯ ಆಚರಣೆಗಳನ್ನು ನಂಬಿ  ಈ  ದುಷ್ಕ್ರತ್ಯ ಎಸಗಿದ್ದಾರೆ.  ಶಾಲೆ ಮತ್ತು ಅವರ ಕುಟುಂಬದ ಏಳಿಗೆಗಾಗಿ ಮಗುವನ್ನು ಬಲಿ ನೀಡುವಂತೆ  ಶಾಲೆಯ ನಿರ್ದೇಶಕ ದಿನೇಶ್ ಬಘೇಲ್ ಅವರನ್ನು ಕೇಳಿದ್ದರು. ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಸೆಪ್ಟೆಂಬರ್ 23 ರಂದು, ಶಿಕ್ಷಕ ರಾಮಪ್ರಕಾಶ್ ಸೋಲಂಕಿ, ದಿನೇಶ್ ಬಾಘೇಲ್ ಮತ್ತು ಶಾಲೆಯ ಮಾಲಕ ಜಸೋಧನ್ ಸಿಂಗ್ ಅವರು ಶಾಲೆಯ ಹಾಸ್ಟೆಲ್‌ನಿಂದ ವಿದ್ಯಾರ್ಥಿಯನ್ನು ಅಪಹರಿಸಿದ್ದರು. ಜಸೋಧನ್ ಸಿಂಗ್ ಅವರು ಮಾಟ ಮಂತ್ರ  ಅಭ್ಯಾಸ ನಂಬಿದ್ದು, ಶಾಲೆ ಮತ್ತು ಅವರ ಕುಟುಂಬದ ಏಳಿಗೆಗಾಗಿ ಮಗುವನ್ನು ತ್ಯಾಗ ಮಾಡುವಂತೆ ಕೇಳಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದು ತನಿಖೆ ಮುಂದುವರೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *