Connect with us

    LATEST NEWS

    ಮೈತ್ರಿ ಸರಕಾರ ಒಂದು ಡೊಂಬರಾಟದ ಕೇಂದ್ರ

    ಮೈತ್ರಿ ಸರಕಾರ ಒಂದು ಡೊಂಬರಾಟದ ಕೇಂದ್ರ

    ಮಂಗಳೂರು ಅಗಸ್ಟ್ 30: ರಾಜ್ಯದ ಕಾಂಗ್ರೇಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನೂರು ದಿನಗಳಲ್ಲಿ ಮೈತ್ರಿ ಸರ್ಕಾರದಿಂದ ನೂರು ಸಮಸ್ಯೆಗಳು ಸೃಷ್ಟಿಯಾಗಿದ್ದು, ಮೈತ್ರಿ ಸರ್ಕಾರ ಒಂದು ಡೊಂಬರಾಟದ ಕೇಂದ್ರವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

    ಮಂಗಳೂರಿನಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾವು ಮುಂಗುಸಿಯಂತಿದ್ದಾರೆ. ಜನಪರವಾದ ಒಂದೆ ಒಂದು ಯೋಜನೆಯನ್ನು ಸರಕಾರ ಕೈಗೊಂಡಿಲ್ಲ. ಜಾಹೀರಾತು ನೀಡಿ ತಮ್ಮನ್ನ ತಾವು ಹೊಗಳಿಕೊಂಡಿದ್ದಾರೆ ಅಷ್ಟೇ, ಜನಪರವಾದ ಒಂದು ಯೋಜನೆ ಬಗ್ಗೆ ಸಿಎಂ ಹೇಳಲಿ ಎಂದು ಸವಾಲು ಎಸೆದರು.

    ರಾಜ್ಯ ಸರಕಾರದ ಮಂತ್ರಿಗಳು ಈಗ ನೆರೆಪೀಡಿತ ಕೊಡಗಿನಲ್ಲಿ ಪ್ರದಕ್ಷಿಣೆ ಹಾಕುತ್ತಾ ಇದ್ದಾರೆ. ಅವರಿಗೆ ಕೊಡಗು ಏನು ಈಗ ಪ್ರೇಕ್ಷಣೀಯ ಸ್ಥಳವೇ..? , ಕೊಡಗಿನ ಜನರಿಗೆ ಮೊದಲು ಸಹಾಯ ಮಾಡಿ, ನೊಂದ ಕೊಡಗು ಜನರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜನರ ಕೆಲಸ ಮಾಡಿ, ಇಲ್ಲದಿದ್ದರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ನೂರು ದಿನದ ಸಂಭ್ರಮ ಬಿಟ್ಟು ಮೊದಲು ಕೆಲಸ ಮಾಡಿ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply