Connect with us

    LATEST NEWS

    ನಟ ಪ್ರಕಾಶ್ ರೈ ಗೆ ಅವಾಜ್ ಹಾಕಿದ ಬಿಗ್ ಬಾಸ್ ಖ್ಯಾತಿಯ ಪ್ರಥಮ್

    ನಟ ಪ್ರಕಾಶ್ ರೈ ಗೆ ಅವಾಜ್ ಹಾಕಿದ ಬಿಗ್ ಬಾಸ್ ಖ್ಯಾತಿಯ ಪ್ರಥಮ್

    ಕಾರವಾರ ಡಿಸೆಂಬರ್ 11: ಕಳೆದ ಬಾರಿಯ ಬಿಗ್ ಬಾಸ್ ವಿನ್ನರ್ ಪ್ರಥಮ್ ಖ್ಯಾತ ಬಹುಬಾಷಾ ನಟ ಪ್ರಕಾಶ್ ರೈಗೆ ಆವಾಜ್ ಹಾಕಿದ್ದಾರೆ. ಹೊನ್ನಾವರದಲ್ಲಿ ನಡೆದ ಕೋಮು ಘರ್ಷಣೆ ಬಳಿಕ ಕಾಣೆಯಾಗಿದ್ದ 21 ವರ್ಷದ ಯುವಕ ಪರೇಶ್ ಮೆಸ್ತ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

    ಇದಕ್ಕೆ ಪೂರಕವಾಗುವಂತೆ ಕಳೆದ ಬಾರಿಯ ಬಿಗ್‌ಬಾಸ್‌ ವಿಜೇತ ಪ್ರಥಮ್‌ ಕೂಡಾ ತಮ್ಮ ಸಿಟ್ಟನ್ನು ಪೇಸ್ ಬುಕ್ ನಲ್ಲಿ ಹೊರಹಾಕಿದ್ದಾರೆ. ಬಿಗ್ ಬಾಸ್ ವಿಜೇತ ಪ್ರಥಮ, ಹಿರಿಯ ನಟ ಪ್ರಕಾಶ್ ರೈ ಅವರಿಗೆ ಬಹಿರಂಗ ಪ್ರಶ್ನೆಯನ್ನು ಹಾಕಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯಾದಾಗ ಈ ದೇಶದಲ್ಲಿ ಎನಾಗ್ತಿದೆ ಎಂದು ಕೇಳಿದ್ದ ಪ್ರಕಾಶ್ ರೈ ವಿರುದ್ದ ಕಿಡಿಕಾರಿದ ಪ್ರಥಮ್ , ಈಗ ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತಾ ಹತ್ಯೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

    ಪ್ರಕಾಶ್ ರೈ ಗೆ ಮಾನವೀಯತೆಯ ಪಾಠ ಕಲಿಸಿದ ಪ್ರಥಮ್ ಪರೇಶ್ ಮೆಸ್ತಾ ವಿಷಯದಲ್ಲಿ ಯಾಕೆ ರಾಜ್ಯದಲ್ಲಿ ಎನಾಗ್ತಿದೆ ಎಂದು ನೀವು ಕೇಳಲ್ಲ ಎಂದು ಪ್ರಶ್ನಿಸಿದ್ದಾರೆ. ಹೊನ್ನಾವರದಲ್ಲಿ ನಡೆದ ವಿಷಯದ ಬಗ್ಗೆ ಮಾಹಿತಿನೇ ಇಲ್ವಾ ಎಂದು ಪ್ರಶ್ನಿಸಿದ್ದಾರೆ.

    ಪ್ರಕಾಶ್ ರೈ ಅವರ just Asking ಗೆ ಟಾಂಗ್ ನೀಡಿದ ಪ್ರಥಮ #purposefully_asking ಎಂದು ಪೋಸ್ಟ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply