Connect with us

    LATEST NEWS

    ಕಾಪುವಿನಲ್ಲಿ ಸಿಎಂ ಬ್ಯಾನರ್- ಬಂಟಿಂಗ್ಸ್ ವಿವಾದ,ಬಿಜೆಪಿ-ಕಾಂಗ್ರೆಸ್ ಮಧ್ಯೆ ಘರ್ಷಣೆ

    ಕಾಪುವಿನಲ್ಲಿ ಸಿಎಂ ಬ್ಯಾನರ್- ಬಂಟಿಂಗ್ಸ್ ವಿವಾದ,ಬಿಜೆಪಿ-ಕಾಂಗ್ರೆಸ್ ಮಧ್ಯೆ ಘರ್ಷಣೆ

    ಉಡುಪಿ, ಜನವರಿ 08 ; ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲೆಯಲ್ಲಿಂದು ಪ್ರವಾಸದಲ್ಲಿರುವಾಗಲೇ ಕಾಪು ತಾಲೂಕಿನಲ್ಲಿ ಸಿಎಂ ಬ್ಯಾನರ್- ಬಂಟಿಂಗ್ಸ್ ವಿವಾದ ಬುಗಿಲೆದ್ದಿದ್ದು, ಬಿಜೆಪಿ- ಕಾಂಗ್ರೆಸ್ ಮಧ್ಯೆ ಮಾರಾಮರಿ ನಡೆದಿದೆ.

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

    ಉಡುಪಿಯಲ್ಲಿ ಸಿಎಂ ಸಾಧನಾ ಸಮಾವೇಶದ ಬ್ಯಾನರ್ ಮತ್ತು ಕಟೌಟನ್ನು ಕಾಂಗ್ರೆಸ್ ಕಾರ್ಯಕರ್ತರು ,ಕಾಪು ಟವರ್ ಗೆ ಅಳವಡಿಸಿದ್ದರು.

    ಇದು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಗಲಾಟೆಗೆ ಕಾರಣವಾಗಿದೆ.ಕಾಂಗ್ರೆಸ್ ಬಂಟಿಂ ಗ್ಸ್ ಅಳವಡಿಸಿದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

    ಇದು ಪುರಸಭೆ ಸಾಮಾನ್ಯ ಸಭೆಯ ನಿರ್ಣಯ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಕಾಪು ಪುರಸಭೆಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ.

    ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಕಾಪು ನಗರಕ್ಕೆ ಕೆಎಸ್ ಆರ್ ಪಿ ಪೊಲೀಸರ ಸಹಿತ ಹೆಚ್ಚುವರಿ ಪೋಲಿಸರನ್ನು ರವಾನೆ ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply