Connect with us

    LATEST NEWS

    ದೀಪಕ್ ರಾವ್ ಕೊಲೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ ಪಾತ್ರವಿಲ್ಲ :ಡಾ.ಭರತ್ ಶೆಟ್ಟಿ

    ದೀಪಕ್ ರಾವ್ ಕೊಲೆಯಲ್ಲಿ ಕಾರ್ಪೋರೇಟರ್ ತಿಲಕ್ ಚಂದ್ರ ಪಾತ್ರವಿಲ್ಲ :ಡಾ.ಭರತ್ ಶೆಟ್ಟಿ

    ಮಂಗಳೂರು, ಜನವರಿ 08 : ದೀಪಕ್ ರಾವ್ ಕೊಲೆ ಪ್ರಕರಣದಲ್ಲಿ ಸ್ಥಳೀಯ ಕಾರ್ಪೋರೇಟರ್ ತಿಲಕ್ ಚಂದ್ರ ಅವರ ಕೈವಾಡ ಇದೆ ಎಂಬ ವಿಷಯ ಸತ್ಯಕ್ಕೆ ದೂರವಾದುದು. ಬಿಜೆಪಿ ಮುಖಂಡ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.

    ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯಿಂದ ತನಿಖೆಯ ಹಾದಿ ತಪ್ಪಿಸುವ ಕೆಲಸವಾಗುತ್ತಿದೆ,

    ಕುಮಾರ ಸ್ವಾಮಿ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದ ಅವರು ಸ್ಥಳೀಯ ಶಾಸಕ ಮೊಯ್ದೀನ್ ಬಾವಾ ಜೆಡಿಎಸ್ ನಲ್ಲಿರುವ ಅವರ ಸಹೋದರನ‌ ಮೂಲಕ ಈ ಹೇಳಿಕೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ ವಿಷಯದಲ್ಲಿ ಕುಮಾರ ಸ್ವಾಮಿ ಹಾಗೂ ಮೊಯ್ದೀನ್ ಬಾವಾರನ್ನು ತನಿಖೆಗೆ ಒಳಪಡಿಸಬೇಕು ಮತ್ತು ನ್ಯಾಯಾಯುತ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂದರು.

    ಕೊಲೆ ಅರೊಪ ಹೊತ್ತ ಕಾರ್ಪೋರೇಟರ್‌ ತಿಲಕ್ ಚಂದ್ರ ಕೂಡ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply