LATEST NEWS
ಎಂಎಲ್ಎ ಸೀಟು ಗೆಲ್ಲಲು 50 ಕೋಟಿ ಖರ್ಚು ಮಾಡುವ ಕಾಲ ಬಂದಿದೆ – ಉಪೇಂದ್ರ
ಎಂಎಲ್ಎ ಸೀಟು ಗೆಲ್ಲಲು 50 ಕೋಟಿ ಖರ್ಚು ಮಾಡುವ ಕಾಲ ಬಂದಿದೆ – ಉಪೇಂದ್ರ
ಉಡುಪಿ ಡಿಸೆಂಬರ್ 6: ಒಂದು ಎಂಎಲ್ ಎ ಸೀಟು ಗೆಲ್ಲಲು ಕನಿಷ್ಠ ಪಕ್ಷ 50 ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಹೇಳಲಾಗುತ್ತಿದ್ದು ಈ ಮಟ್ಟಿಗೆ ದೇಶದ ಪ್ರಜಾಪ್ರಭುತ್ವ ಬಂದಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ 15 ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳಿಂದ ಆಹ್ವಾನ ಬಂದಿದೆ. ಆದರೆ ನನ್ನ ಕಲ್ಪನೆ ಅವರ ಜೊತೆ ಹೊಂದಾಣಿಕೆಯಾಗುತ್ತಿಲ್ಲ ಈ ಹಿನ್ನಲೆಯಲ್ಲಿ ನಾನು ನನ್ನ ಆತ್ಮತೃಪ್ತಿಗಾಗಿ ರಾಜಕೀಯಕ್ಕೆ ಬಂದಿದ್ದು ನನ್ನ ಕಲ್ಪನೆಯನ್ನು ಸಾಕಾರಗೊಳಿಸಲು ಕೆಪಿಜೆಪಿ ಪಕ್ಷವನ್ನು ಕಟ್ಟಿದ್ದೆನೆ ಎಂದು ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದರು.
ದೇಶದಲ್ಲಿ ಎಂದಿಗೂ ಸತ್ಯ ಸಾಯಲ್ಲ- ಸತ್ಯನೇ ಗೆಲ್ಲೋದು ಎಂದು ಹೇಳಿದ ಅವರು ಪಕ್ಷ ಕಟ್ಟಿದ ನಂತರ ಸುಮಾರು 50 ಸಾವಿರ ಇಮೇಲ್ ಬಂದಿದ್ದು, ಸುಮಾರು 30 ಸಾವಿರ ಜನ ಕ್ರಿಯಾಶೀಲ ಜನ ನನ್ನೊಂದಿಗೆ ಇದ್ದಾರೆ ಎಂದು ತಿಳಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯೊಬ್ಬರಿಂದ ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಜನ ಬದಲಾಗದಿದ್ದರೆ ದೇಶ ಬದಲಾಗಲ್ಲ ಎಂದರು. ನಾನು ಪ್ರ್ಯಾಕ್ಟಿಕಲ್ ಇಲ್ಲ ಅಂತ ಜನ ನಗುತ್ತಿದ್ದಾರೆ, ಆದರೆ ಈಗ ಪ್ರಜೆಗಳು ಮಾತನಾಡುವ ಕಾಲ ಬಂದಿದೆ. ಒಂದು ಎಂ ಎಲ್ ಎ ಸೀಟು ಗೆಲ್ಲಲು 50 ಕೋಟಿ ಬೇಕಂತೆ ಖರ್ಚು ಮಾಡುವ ಹಂತಕ್ಕೆ ದೇಶದ ಪ್ರಜಾಪ್ರಭುತ್ವ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
You must be logged in to post a comment Login