Connect with us

    BANTWAL

    ನೀರುಪಾಲಾದ ಐವರಲ್ಲಿ ನಾಲ್ವರ ಮೃತದೇಹ ಪತ್ತೆ

    ನೀರುಪಾಲಾದ ಐವರಲ್ಲಿ ನಾಲ್ವರ ಮೃತದೇಹ ಪತ್ತೆ

    ಬಂಟ್ವಾಳ ನವೆಂಬರ್ 7 : ಬಂಟ್ವಾಳ ತಾಲೂಕಿನ ಅರಲ ಮುಲ್ಲರಪಟ್ನದಲ್ಲಿ ಫಲ್ಗುಣಿ ನದಿಗೆ ಈಜಲು ಹೋಗಿ ನೀರುಪಾಲಾದ ಐವರು ಬಾಲಕರಲ್ಲಿ ನಾಲ್ವರ ಮೃತದೇಹ ಪತ್ತೆಯಾಗಿವೆ, ಇನ್ನೂ ಪತ್ತೆಯಾಗದ ಮುದಸಿರ್ ಎನ್ನುವ ಬಾಲಕನ ಮೃತದೇಹ, ಕತ್ತಲಾದ ಹಿನ್ನಲೆಯಲ್ಲಿ ಶೋಧ ಕಾರ್ಯಾಚರಣೆ ನಾಳೆಗೆ ಮುಂದೂಡಿಕೆ.ಪತ್ತೆಯಾದ ಬಾಲಕರು ಅಸ್ಲಾಮ್ , ರಮೀಝ್, ಅಜ್ಮಲ್, ಸವಾದ್ ಎಂದು ಗುರುತಿಸಲಾಗಿದೆ.

    ಸೋಮವಾರ ಪಲ್ಗುಣಿ ನದಿಯ ನೀರಿಗೆ ಇಳಿದಿದ್ದ ಐವರು ಬಾಲಕರು ನಾಪತ್ತೆಯಾಗಿದ್ದರು. ಅವರ ಬಟ್ಟೆಗಳು ಹೊಳೆಯ ಸಮೀಪ ಸಿಕ್ಕಿದ್ದರಿಂದ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು. ನಂತರ ಶೋಧ ಕಾರ್ಯ ಮುಂದುವರೆಸಿದಾಗ ನಾಲ್ವರ ಮೃತದೇಹ ಪತ್ತೆಯಾಗಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply