Connect with us

LATEST NEWS

ಆಳ್ವಾಸ್ ಕಾಲೇಜಿನ ಮೃತ ವಿಧ್ಯಾರ್ಥಿನಿ ಕಾವ್ಯಾ ಮನೆಗೆ ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ ಭೇಟಿ- ಸಾಂತ್ವಾನ

ಮಂಗಳೂರು ಜುಲೈ 30 : ಆಳ್ವಾಸ್ ಕಾಲೇಜಿನ ಪ್ರತಿಭಾನ್ವಿತ ಮೃತ ವಿದ್ಯಾರ್ಥಿನಿ ಕಾವ್ಯಾಳ ಮನೆಗೆ ಸರಕಾರದ ಮುಖ್ಯ ಸಚೇತಕರಾದ ಐವನ್ ಡಿ ಸೋಜಾ ರವರು ಭೇಟಿ ನೀಡಿದರು. ಸರಕಾರದ ಮುಖ್ಯ ಸಚೇತಕರಾದ ಐವನ್ ಡಿ ಸೋಜಾ ಅವರು ಕಾವ್ಯಾ ಳ ತಂದೆ ಲೋಕೇಶ್ ಹಾಗೂ ತಾಯಿ ಶ್ರೀಮತಿ ಬೇಬಿ ಯವರಿಗೆ ಈ ಸಂದರ್ಭದಲ್ಲಿ ಸಾಂತ್ವಾನ ಹೇಳಿದರು. ಅತಿ ಕಿರಿಯ ವಯಸ್ಸಿನಲ್ಲಿ ಕಾವ್ಯಾ ಮಾಡಿದ ಸಾಧನೆ ಬಗ್ಗೆ ಹೆತ್ತವರಿಂದ ಮಾಹಿತಿಯನ್ನು  ಪಡೆದರು. ಈ ಸಂದರ್ಭದಲ್ಲಿ ಮನೆಯವರೊಂದಿಗೆ ಮಾತನಾಡಿದ ಐವನ್ ಡಿಸೋಜಾ ಕಾವ್ಯಾಳ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡುವ ಭರವಸೆಯಿತ್ತರು ಹಾಗೂ ಸರಕಾರದ ವತಿಯಿಂದ ದೊರೆಯುವ ಸೌಲಭ್ಯಗಳನ್ನು ಕೂಡಾ ಒದಗಿಸಿ ಕೊಡುವುದಾಗಿ ತಿಳಿಸಿದರು.

Share Information
Advertisement
Click to comment

You must be logged in to post a comment Login

Leave a Reply