Connect with us

LATEST NEWS

ಆಧಾರ್ ತಿದ್ದುಪಡಿಗೆ ಸದಾವಕಾಶ – ಉಡುಪಿಯಲ್ಲಿ ಆಧಾರ್ ಅದಾಲತ್

ಆಧಾರ್ ತಿದ್ದುಪಡಿಗೆ ಸದಾವಕಾಶ – ಉಡುಪಿಯಲ್ಲಿ ಆಧಾರ್ ಅದಾಲತ್

ಉಡುಪಿ, ಡಿಸೆಂಬರ್ 27: ಆಧಾರ್ ಕಾರ್ಡ್‍ನ ಹೊಸ ನೋಂದಾವಣಿ ಹಾಗೂ ತಿದ್ದುಪಡಿಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಇ-ಆಡಳಿತ ಕೇಂದ್ರ ಬೆಂಗಳೂರು ಹಾಗೂ ಜಿಲ್ಲಾಡಳಿತ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಧಾರ್ ಅಧಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಜತಾದ್ರಿಯ ಅಟಲ್ ಬಿಹಾರಿ ವಾಜೇಪಾಯಿ ಸಭಾಂಗಣದಲ್ಲಿ 26 ರಿಂದ 30 ರವರೆಗಿ 5 ದಿನಗಳ ಕಾಲ ಆಧಾರ್ ಕಾರ್ಡ್ ಹೊಸ ನೋಂದಾವಣಿ ಹಾಗೂ ತಿದ್ದುಪಡಿಯನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದು ಕೊಳ್ಳಬೇಕು ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳುವವರು ಹಾಗೂ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಿಸಬಹುದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *