BANTWAL
ಕಲ್ಲಡ್ಕದಲ್ಲಿ ತಲ್ವಾರ್ ದಾಳಿ – ಬಂದ್ ಆದ ಕಲ್ಲಡ್ಕ ಪೇಟೆ
ಕಲ್ಲಡ್ಕದಲ್ಲಿ ತಲ್ವಾರ್ ದಾಳಿ – ಬಂದ್ ಆದ ಕಲ್ಲಡ್ಕ ಪೇಟೆ
ಮಂಗಳೂರು ಡಿಸೆಂಬರ್ 26: ಕಲ್ಲಡ್ಕದಲ್ಲಿ ಮತ್ತೆ ತಲವಾರ್ ಝಳಪಿಸಿದೆ. ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೋರ್ವನ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದಾರೆ.
ದಾಳಿ ಒಳಗಾದ ವ್ಯಕ್ತಿಯನ್ನು ಕೇಶವ ವೀರಕಂಭ (33) ಎಂದು ಗುರುತಿಸಲಾಗಿದ್ದು. ಈತ ಜಲೀಲ್ ಕರೋಪಾಡಿ ಹತ್ಯೆಯ ಆರೋಪಿ ಎಂದು ಹೇಳಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ಮುಸುಕಧಾರಿಗಳು ಕೇಶವ ವೀರಕಂಭ ಅವರ ಮೇಲೆ ತಲವಾರ್ ನಿಂದ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಕೇಶವ ವೀರಕಂಭ ಅವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಲ್ವಾರ್ ದಾಳಿ ಹಿನ್ನಲೆಯಲ್ಲಿ ಕಲ್ಲಡ್ಕ ಸಂಪೂರ್ಣ ಬಂದ್ ಆಗಿದ್ದು , ಕಲ್ಲಡ್ಕದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 2017ರ ಎಪ್ರಿಲ್ 20 ರಂದು ಜಲೀಲ್ ಕರೋಪಾಡಿಯ ಹತ್ಯೆ ನಡೆದಿತ್ತು. ಜಲೀಲ್ ಕೊಲೆಗೆ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
You must be logged in to post a comment Login