Connect with us

    LATEST NEWS

    ಭಗವದ್ಗೀತೆ ಪುಸ್ತಕಕ್ಕೆ ಅವಮಾನ ಮಾಡಿದ ಬಿಜೆಪಿ ಸದಸ್ಯ

    ಭಗವದ್ಗೀತೆ ಪುಸ್ತಕಕ್ಕೆ ಅವಮಾನ ಮಾಡಿದ ಬಿಜೆಪಿ ಸದಸ್ಯ

    ಉಡುಪಿ ಡಿಸೆಂಬರ್ 23: ಬಿಜೆಪಿ ಪಟ್ಟಣ ಪಂಚಾಯತ್ ಸದಸ್ಯ ಭಗವದ್ಗೀತೆ ಪುಸ್ತಕಕ್ಕೆ ಅವಮಾನ ಮಾಡಿದ ಘಟನೆ ನಡೆದಿದೆ.

    ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ವಿಶೇಷ ಸಭೆಯಲ್ಲಿ ಈ ಘಟನೆ ನಡೆದಿದ್ದು. ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬಾರ್ ತೆರೆಯಲು ಅನುಮತಿ ನೀಡುವಾಗ ಹಣ ಪಡೆಯಲಾಗಿದೆ ಎಂದು ಪ್ರತಿಪಕ್ಷದವರು ಆರೋಪಿ ಮಾಡಿದರು.

    ಈ ಹಿನ್ನಲೆಯಲ್ಲಿ ಆಡಳಿತ ಪಕ್ಷಕ್ಕೆ ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಎಂದು ಹೇಳಿದ ಪ್ರತಿಪಕ್ಷದವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ರಾಜು ಪೂಜಾರಿ ಭಗವದ್ಗೀತೆ ಪುಸ್ತಕ ಕಸಿದುಕೊಂಡು ಟೇಬಲ್ ಮೇಲೆ ಎಸೆದಿದ್ದಾರೆ.

    ಭಗವದ್ಗೀತೆ ಪುಸ್ತಕ ಕಸಿದುಕೊಂಡು ಟೇಬಲ್ ಮೇಲೆ ಎಸೆದ ಬಿಜೆಪಿ ಸದಸ್ಯ ರಾಜು ಪೂಜಾರಿ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಪವಿತ್ರ ಗ್ರಂಥವನ್ನು ಈ ರೀತಿಯಾಗಿ ಅವಮಾನ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply