Connect with us

LATEST NEWS

ಮಂಗಳೂರಿನಲ್ಲಿ ಶೂನ್ಯ ಸಾಧನೆಯನ್ನು ಹೇಳಿದ ಪ್ರಧಾನಿ ಮೋದಿ – ರಣದೀಪ್ ಸುರ್ಜೆವಾಲ

ಮಂಗಳೂರಿನಲ್ಲಿ ಶೂನ್ಯ ಸಾಧನೆಯನ್ನು ಹೇಳಿದ ಪ್ರಧಾನಿ ಮೋದಿ – ರಣದೀಪ್ ಸುರ್ಜೆವಾಲ

ಮಂಗಳೂರು ಮೇ 06: 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ಮಂಗಳೂರಿನಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ . ಈಗ ಮತ್ತೆ ನಿನ್ನೆ ಮೋದಿ ಮಂಗಳೂರಿಗೆ ಬಂದು ಶೂನ್ಯ ಸಾಧನೆಯನ್ನು ಹೇಳಿ ಹೋಗಿದ್ದಾರೆ ಎಂದು ಎಐಸಿಸಿ ವಕ್ತಾರ ರಣದೀಪ್ ಸುರ್ಜೆವಾಲ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ರೆಡ್ಡಿ ಬ್ರದರ್ಸ್ ಗ್ಯಾಂಗ್ ಳು ಸೇರಿ ಕರ್ನಾಟಕವನ್ನು ಲೂಟಿ ಮಾಡಲು ಹೊರಟಿವೆ ಎಂದು ಆರೋಪಿಸಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಹರ ಹರ್ ಮೋದಿ ಘರ್ ಘರ್ ಮೋದಿ ಬದಲು ಎಂಬ ಘೋಷಣೆ ಕೇಳಿಬರುತ್ತಿತ್ತು. ಆದರೆ ಕರ್ನಾಟಕದ ಚುನಾವಣೆ ಬಳಿಕ ಮುಂಬರುವ ಲೋಕ ಸಭಾ ಚುನಾವಣೆಯ ವರೆಗೆ ಬಾಯ್ ಬಾಯ್ ಮೋದಿ ಸ್ಲೋಗನ್ ಕೇಳಿಬರಲಿದೆ ಎಂದು ಅವರು ವ್ಯಂಗ್ಯ ವಾಡಿದರು.

ಚುನಾವಣೆಯಲ್ಲಿ ನೀಡುವ ಭರವಸೆಗಳನ್ನು ನಂಬಬೇಕಾಗಿಲ್ಲ ಎಂದು ಪ್ರಧಾನಿಯೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯನ್ನು ನಂಬೋವುದಾದರೂ ಹೇಗೆ ? ಜಿಜೆಪಿ ಎಂದರೆ ಅಂದರೆ ಬ್ಯಾಕ್ ಸ್ಟಾಬ್ಬಿಂಗ್ ಜನತಾ ಪಾರ್ಟಿ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *