Connect with us

    KARNATAKA

    ಸೆಲ್ಫಿ ತೆಗೆಯಲು ಹೋಗಿ ನೀರುಪಾಲಾದ ಗೃಹಿಣಿ

    ಮೈಸೂರು ಮೇ 07: ಕಪಿಲಾ ನದಿಯ ಸಮೀಪ ಸೆಲ್ಫಿ ತೆಗೆಯಲು ಹೋಗಿ ಗೃಹಿಣಿಯೊಬ್ಬಳು ನೀರು ಪಾಲಾದ ಘಟನೆ ಮೈಸೂರಿನ ಶ್ರೀ ಕ್ಷೇತ್ರ ಸಂಗಮ ಬಳಿ ನಡೆದಿದೆ.


    ಮೃತರನ್ನು ಚಾಮರಾಜನಗರ ಜಿಲ್ಲೆ ನಂಜದೇವನಪುರ ಗ್ರಾಮದ ಗಿರೀಶ್ ಎಂಬುವರ ಪತ್ನಿ ಕವಿತಾ(38) ಎಂದು ಗುರುತಿಸಲಾಗಿದ್ದು, ಕವಿತಾ, ಪತಿ ಗಿರೀಶ್ ಹಾಗೂ ಪುತ್ರಿಯ ಜೊತೆಗೆ ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸಂಗಮಕ್ಕೆ ಪೂಜೆಗೆ ತೆರಳಿದ್ದರು. ದೇವಾಲಯದ ಪ್ರವೇಶಕ್ಕೂ ಮುನ್ನ ಕಪಿಲಾ ನದಿಯಲ್ಲಿ ಕಾಲು ತೊಳೆಯಲು ಹೋಗಿದ್ದರು. ಇದೇ ವೇಳೆ ಕವಿತಾ ಮೊಬೈಲ್‍ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ಕಾಲು ಜಾರಿ ನೀರು ಪಾಲಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply