Connect with us

    DAKSHINA KANNADA

    ಸುಳ್ಯದ ಪೆರ್ನಾಜೆ ಮುಗೇರ್ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ

    ಪುತ್ತೂರು ಸೆಪ್ಟೆಂಬರ್ 18: ಸುಳ್ಯದ ಪೆರ್ನಾಜೆ ಮುಗೇರ್ ಮತ್ತೆ ನಲ್ಲಿ ಕಾಡಾನೆ ಉಪಟಳ ಜಾಸ್ತಿಯಾಗಿದ್ದು . ಪೆರ್ನಾಜೆ ಸುತ್ತಮುತ್ತಲಿನ ಕೃಷಿಕರ ಜಮೀನಿನಲ್ಲಿ ಕಾಡಾನೆಯ ಪುಂಡಾಟ ಮರೆದಿದೆ.


    ಸುಳ್ಯದ ಪೆರ್ನಾಜೆ ಮುಗೇರ್ ಕಾಡಾನೆ ಪ್ರತ್ಯಕ್ಷಗೊಂಡಿದ್ದು, ಸುತ್ತಮತ್ತಲಿನ ಕೃಷಿಕರ ತೋಟಗಳಿಗೆ ದಾಳಿ ಮಾಡಿ ತೆಂಗಿನ ಮರ, ಬಾಳೆಗಿಡ, ಅಡಿಕೆ ಮರವನ್ನ ನೆಲಕ್ಕುರಿಳಿಸಿದೆ. ಕಾಡಾನೆಯ ಉಪಟಳಕ್ಕೆ ಕೆಲ ಕೃಷಿಕರ ಬೆಳೆ ನಾಶವಾಗಿದೆ.

    ಇತ್ತೀಚೆಗೆ ಪುತ್ತೂರಿನ ಸವಣೂರು, ಕಠಾರ ಭಾಗದಲ್ಲಿ ಎರಡು ಕಾಡಾನೆಗಳು ಕಂಡು ಬಂದಿದ್ದವು, ಬಳಿಕ ಸುಳ್ಯದ ಮಂಡೆಕೋಲು ಕಾಡಿನ ಮೂಲಕ ಕೇರಳದ ಅಲೆಟ್ಟಿಗೆ ಕಾಡಾನೆ ತೆರಳಿತ್ತು ಎಂದು ವರದಿಯಾಗಿತ್ತು. ಇದೀಗ ಮತ್ತೆ ಸುಳ್ಯದ ಪೆರ್ನಾಜೆಯಲ್ಲಿ ಸಂಚರಿಸುತ್ತಿರುವ ಕಾಡಾನೆ ಕೃಷಿಕರ ತೋಟಗಳನ್ನು ನಾಶ ಮಾಡುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply