KARNATAKA
ಗುಂಡ್ಲುಪೇಟೆ: ಅಕ್ಕಿ ಗೋದಾಮಿಗೆ ಕಾಡಾನೆ ಲಗ್ಗೆ, ಶಟರ್ ಮುರಿದು ಅಕ್ಕಿ ಮೂಟೆ ಎಳೆದೊಯ್ದ ಆನೆ..!
ಗುಂಡ್ಲುಪೇಟೆ: : ಅಕ್ಕಿ ಗೋದಾಮಿಗೆ ಕಾಡಾನೆಯೊಂದು ಲಗ್ಗೆ ಇಟ್ಟು,ಶಟರ್ ಮುರಿದು ಅಕ್ಕಿ ಮೂಟೆ ಎಳೆದೊಯ್ದ ಘಟನೆ ಕೇರಳ ಕರ್ನಾಟಕದ ಗಡಿ ಭಾಗವಾದ ಗುಂಡ್ಲು ಪೇಟೆಯಲ್ಲಿ ನಡೆದಿದೆ.
ಹಾಡಹಗಲೇ ನೂರಾರು ಜನರ ಬೆದರಿಕೆಗೆ ಜಗ್ಗದ ಕಾಡಾನೆ ನೇರವಾಗಿ ಆಹಾರ ನಿಗಮದ ಗೋದಾಮಿನ ಬಳಿ ಬಂದಿದೆ ಇಲ್ಲಿ ಗೋದಾಮಿಗೆ ಶಟರ್ ಹಾಕಿರುವುದನ್ನು ಕಂಡ ಆನೆ ಸೊಂಡಿಲಿನಿಂದ ಶಟರ್ ಮುರಿದು ಒಳಗಿನಿಂದ ಅಕ್ಕಿಯ ಚೀಲವನ್ನು ಹೊರಗೆ ಎಳೆದು ತಂದು ಅದರಲ್ಲಿದ್ದ ಅಕ್ಕಿಯನ್ನು ತಿನ್ನಲು ಶುರು ಮಾಡಿದೆ. ಗ್ರಾಮಸ್ಥರು ಆನೆಯನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆನೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಎಲ್ಲಾ ಕಡೆ ವೈರಲ್ ಆಗಿದೆ.
You must be logged in to post a comment Login