LATEST NEWS
ವಿವಿಐಪಿ ರೋಡ್ ಕ್ರಾಸಿಂಗ್ ಗಾಗಿ ಟ್ರಾಫಿಕ್ ನಿಲ್ಲಿಸಿದ ಪೊಲೀಸರು…!!
ಉಡುಪಿ ಫೆಬ್ರವರಿ 11: ಉಡುಪಿ ನಗರದಲ್ಲಿ ಇಂದು ಏಕಾಏಕಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಜಂಕ್ಷನ್ನಲ್ಲಿ ಮೂರು ಜನ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗಳು ಇದ್ದರೂ ಕೂಡ ಟ್ರಾಫಿಕ್ ಕ್ಲಿಯರ್ ಮಾಡಲು ಆಗಲಿಲ್ಲ. ಒಬ್ಬರು ವಿವಿಐಪಿ ರೋಡ್ ಕ್ರಾಸಿಂಗ್ ಮಾಡಲು ಈ ರೀತಿ ಟ್ರಾಫಿಕ್ ನ್ನು ಪೊಲೀಸರು ನಿಲ್ಲಿಸಬೇಕಾಗಿತ್ತು. ಆ ವಿವಿಐಪಿ ಯಾರು ಗೊತ್ತಾ…!!
ಕಲ್ಸಂಕ ಜಂಕ್ಷನ್ ಬಳಿ ನಾಗರಹಾವೊಂದು ಬಂದಿತ್ತು. ಅಂಬಾಗಿಲು ರಸ್ತೆ ಕಡೆಯಿಂದ ಕೃಷ್ಣಮಠದ ಪಾರ್ಕಿಂಗ್ ಏರಿಯಾಗೆ ಹೋಗುವ ಕಡೆ ನಾಗರಹಾವು ನಿಧಾನಕ್ಕೆ ಚಲಿಸುತ್ತಿತ್ತು. ಸಿಮೆಂಟ್ ರಸ್ತೆಯಾದ್ದರಿಂದ ವೇಗವಾಗಿ ರಸ್ತೆದಾಟಲು ನಾಗರಹಾವಿಗೆ ಸಾಧ್ಯವಾಗಿಲ್ಲ.
ಹೀಗಾಗಿ ಸ್ಥಳೀಯರು, ವಾಹನ ಸವಾರರು , ಪೊಲೀಸರು ರಸ್ತೆದಾಟಲು ಅವಕಾಶ ಮಾಡಿಕೊಟ್ಟರು. ಯಾವುದೇ ವಾಹನಗಳು ಅಡ್ಡ ಚಲಿಸದಂತೆ ನಾಗರಹಾವಿಗೆ ತಬ್ಬಿಬ್ಬಾಗದಂತೆ ನೋಡಿಕೊಂಡರು. ಕೆಲವು ಎಡಬಿಡಂಗಿ ದ್ವಿಚಕ್ರವಾಹನ ಸವಾರರು ಹಾವು ದಾಟುವ ಮೊದಲೇ ರಸ್ತೆದಾಟಲು ಪ್ರಯತ್ನಿಸಿದರೂ ಪೊಲೀಸರು ಅಡ್ಡಗಟ್ಟಿ ನಾಗರಹಾವನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದರು.
You must be logged in to post a comment Login