KARNATAKA
ಮಗಳ ಮೇಲೆ ಕಣ್ಣಾಕಿದ ಚಿನ್ನದ ವ್ಯಾಪಾರಿಯ ಚೆನ್ನಾಗಿ ತದಕಿದ ತಾಯಿ..!
ಆಭರಣದ ಅಂಗಡಿಗೆ ಬಂದಿದ್ದ ತಾಯಿ ಅಪ್ರಾಪ್ತ ಮಗಳೊಂದಿಗೆ ಅನುಚಿತ ವರ್ತನೆ ತೋರಿದ ಆಭರಣ ವ್ಯಾಪಾರಿಗೆ ಚೆನ್ನಾಗಿ ತದಕಿದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು: ಆಭರಣದ ಅಂಗಡಿಗೆ ಬಂದಿದ್ದ ತಾಯಿ ಅಪ್ರಾಪ್ತ ಮಗಳೊಂದಿಗೆ ಅನುಚಿತ ವರ್ತನೆ ತೋರಿದ ಆಭರಣ ವ್ಯಾಪಾರಿಗೆ ಚೆನ್ನಾಗಿ ತದಕಿದ ಘಟನೆ ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ತರೀಕೆರೆ ಪಟ್ಟಣದ ಎಂಜಿ ರಸ್ತೆಯಲ್ಲಿರುವ ಆರೋಪಿ ಅಮೀರ್ ಮಾಲೀಕತ್ವದ ಆಭರಣ ಮಳಿಗೆಗೆ ತಾಯಿ-ಮಗಳು ಬಂದಿದ್ದರು
ಮಾತನಾಡುವ ನೆಪದಲ್ಲಿ ಆರೋಪಿ ಅಮೀರ್ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರು.
ಘಟನೆಯ ಬಗ್ಗೆ ಬಾಲಕಿ ತನ್ನ ತಾಯಿಗೆ ದೂರು ನೀಡಿದಾಗ, ಮಹಿಳೆ ಕೋಪಗೊಂಡು ಅಮೀರನಿಗೆ ತಮ್ಮ ಪಾದರಕ್ಷೆ ಕಳಚಿ ಚೆನ್ನಾಗಿ ಪೂಜೆ ಮಾಡಿದ್ದಾರೆ.
ಘಟನೆ ಮಾಹಿತಿ ಪಡೆದ ಸಾರ್ವಜನಿಕರು ಕೂಡ ಆಕೆಯೊಂದಿಗೆ ಸೇರಿಕೊಂಡು ಆರೋಪಿ ಅಮೀರ್ ಗೆ ಥಳಿಸಿದ್ದು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಹಿಂದೆಯು ಆರೋಪಿ ತನ್ನ ಅಂಗಡಿಗೆ ಬಂದ ಮಹಿಳೆಯರು ಮತ್ತು ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದನು ಎಂದು ತಿಳಿದುಬಂದಿದೆ.
ಈ ಸಂಬಂಧ ತರೀಕೆರೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login