Connect with us

    LATEST NEWS

    ಮಂಕಿಸ್ಟಾಂಡ್ ಬಳಿ ಯುವತಿ ರಕ್ಷಿಸಿದ್ದಕ್ಕೆ ಬಜರಂಗದಳ ಕಾರ್ಯಕರ್ತರ ಸುಳ್ಳು ಕೇಸು ದಾಖಲು – ವಿಎಚ್ ಪಿ ಬಜರಂಗದಳ ಖಂಡನೆ

    ಮಂಗಳೂರು ನವೆಂಬರ್ 29: ಕಳೆದ ದಿನ ಮಂಗಳೂರಿನ ಮಂಕಿಸ್ಟಾಂಡ್ ಬಳಿ ಚಿಕ್ಕಮಗಳೂರಿನ ಯುವತಿಯನ್ನು ಸ್ಥಳೀಯ ಯುವಕರು ಪೊಲೀಸರಿಗೆ ಮಾಹಿತಿ ನೀಡಿ ಲವ್ ಜಿಹಾದ್ ನಿಂದ ರಕ್ಷಣೆ ಮಾಡಲಾಯಿತು. ಆ ಸಂಧರ್ಭದಲ್ಲಿ ಯಾವುದೇ ಗಲಭೆ ಹೊಡೆದಾಟ ನಡೆದಿಲ್ಲ ಆದರೆ ಪೊಲೀಸರು ವಿನಾಕಾರಣ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಿ ಅವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬಲವಾಗಿ ಖಂಡಿಸುತ್ತದೆ.


    ದ್ವೇಷ ರಾಜಕೀಯಕ್ಕೆ ಬಜರಂಗದಳ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಮನೋಸ್ಥೈರ್ಯ ಕುಗ್ಗಿಸಲು ಪೊಲೀಸ್ ಇಲಾಖೆಯನ್ನು ದಾಳವಾಗಿ ಉಪಯೋಗಿಸುತ್ತಿರುವ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿಕೃತ್ಯ ಇದಾಗಿದ್ದು, ತಕ್ಷಣ ಬಜರಂಗದಳ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸು ಹಿಂಪಡೆಯಬೇಕು ಮತ್ತು ಹಿಂದೂ ಯುವತಿಯನ್ನು ಲವ್ ಜಿಹಾದ್ ಗೆ ಯತ್ನಿಸಿದ ಪಾಂಡೇಶ್ವರದ ನೂರುಲ್ ಅಮೀನ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಂದು ವಿಶ್ವಹಿಂದೂ ಪರಿಷದ್ ಆಗ್ರಹಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply