Connect with us

    LATEST NEWS

    ವೀರ ವೆಂಕಟೇಶ ದೇವರ ಚಾತುರ್ಮಾಸ ಪ್ರಾರಂಭ

    ಮಂಗಳೂರು, ಜುಲೈ 16: ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ ದೇವರ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ಆಚರಣೆಗೆ ವಿಧ್ಯುಕ್ತವಾಗಿ ಇಂದು ವೈದಿಕ ವಿಧಿವಿಧಾನದೊಂದಿಗೆ ಪ್ರಾರಂಭಗೊಂಡಿತು.

    ಚಿತ್ರ : ಮಂಜು ನೀರೇಶ್ವಾಲ್ಯ

    ಪ್ರಾತಃ ಕಾಲ ಸಮಸ್ತ ಸಮಾಜಬಾಂಧವ ರೊಂದಿಗೆ ಶ್ರೀ ದೇವಳದ ಆಡಳಿತ ಮಂಡಳಿ ಹಾಗೂ ವಿದ್ವತ್ ವೈದಿಕರು ಶ್ರೀ ದೇವರ ಸನ್ನಿಧಾನದಲ್ಲಿ ಮಹಾಪ್ರಾರ್ಥನೆ ನಡೆಸಿ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ ,ಪುಳಕಾಭಿಷೇಕ , ಪವಮಾನಾಭಿಷೇಕ ಹಾಗೂ ಶತ ಕಲಶಾಭಿಷೇಕಗಳು ಜರಗಿದವು , ಮಧ್ಯಾನಃ ಪೂಜೆ ಬಳಿಕ ಸಮಾರಾಧನೆ ನಡೆಯಿತು.

    ಈ ಸಂದರ್ಭದಲ್ಲಿ ಶ್ರೀ ದೇವಳದ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಸಾಹುಕಾರ್ ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಪ್ರಧಾನ ಅರ್ಚಕರಾದ ವೇದಮೂರ್ತಿ ಹರೀಶ್ ಭಟ್ , ವೇದಮೂರ್ತಿ ಚಂದ್ರಕಾಂತ್ ಭಟ್ ತಂತ್ರಿಗಳಾದ ಪಂಡಿತ್ ಕಾಶೀನಾಥ್ ಆಚಾರ್ಯ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply