Connect with us

DAKSHINA KANNADA

ವಾರ್ತಾಭಾರತಿ ಪತ್ರಿಕೆಯ ವರದಿಗಾರನ ಬಂಧನ ವ್ಯಾಪಕ ಖಂಡನೆ

ಮಂಗಳೂರು ಸೆಪ್ಟೆಂಬರ್ 8: ಸುಳ್ಳು ಮಾಹಿತಿಯ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರ್ತಾ ಭಾರತಿ  ಪತ್ರಿಕೆಯ ವರದಿಗಾರರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಆರ್ ಎಸ್ ಎಸ್  ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುವ ಕಲಂದರ್ ಎಂಬುವರ ಮನೆಗೆ ಪೊಲೀಸರು ತನಿಖೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಪವಿತ್ರ ಕುರಾನ್ ಗ್ರಂಥವನ್ನು ಪೊಲೀಸರು ನೆಲಕ್ಕೆ ಬಿಸಾಕಿ ಅವಹೇಳನ ಮಾಡಿದ್ದಾರೆ ಹಾಗೂ ಮನೆಯ ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಾರ್ತಾ ಭಾರತೀಯ ವರದಿಗಾರ ಇಮ್ತಿಯಾಝ್ ಪಾಷಾ ತುಂಬೆ ಸುದ್ದಿ ಬರೆದಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ಈ ನಡುವೆ ಈ ರೀತಿಯ ಘಟನೆ ನಡೆದಿಲ್ಲ .ಪವಿತ್ರ ಕುರಾನ್ ಗ್ರಂಥಕ್ಕೆ ಅಪಮಾನ ಮಾಡಿದ ಕೃತ್ಯ ನಡೆದಿಲ್ಲ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಇರುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಆದರೆ ವಾರ್ತಾ ಭಾರತೀ ಪತ್ರಿಕೆಯಲ್ಲಿ  ಪವಿತ್ರ ಕುರಾನ್ ಗೆ ಅವಮಾನ ಮಾಡಿದ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸರು ವರದಿಗಾರ ಇಮ್ತಿಯಾಝ್ ಪಾಷಾ ತುಂಬೆ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ .

ವರದಿಗಾರನ ಬಂಧನ ವಿರೋಧಿಸಿ ಪ್ರತಿಭಟನೆ ಎಚ್ಚರಿಕೆ

ವಾರ್ತಾ ಭಾರತಿ ವರದಿಗಾರನ ಬಂಧನ ವಿರೋಧಿಸಿ ಈಗ ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ . ವಾರ್ತಾ ಭಾರತಿ ವರದಿಗಾರನ ಬಂಧನವನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ , ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಜೆಡಿಎಸ್ ಜಿಲ್ಲಾ ಘಟಕ ಖಂಡಿಸಿದೆ.

Share Information
Advertisement
Click to comment

You must be logged in to post a comment Login

Leave a Reply