KARNATAKA
ಮಾಜಿ ಸಚಿವ ಯು.ಟಿ.ಖಾದರ್ ಆಪ್ತನಿಂದ ಪೋಲೀಸರ ಮೇಲೆ ದರ್ಪ
ಮಾಜಿ ಸಚಿವ ಯು.ಟಿ.ಖಾದರ್ ಆಪ್ತನಿಂದ ಪೋಲೀಸರ ಮೇಲೆ ದರ್ಪ
ಮಂಗಳೂರು ಮೇ.13: ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ, ಮಾಜಿ ಸಚಿವ ಯು.ಟಿ ಖಾದರ್ ಆಪ್ತ ಹರ್ಷಾದ್ ವರ್ಕಾಡಿ ಪೊಲೀಸರ ಮುಂದೆ ದರ್ಪ ತೋರಿ, ರಂಪಾಟ ನಡೆಸಿದ ಘಟನೆ ಮಂಗಳೂರು ಹೊರವಲಯದಲ್ಲಿ ನಡೆದಿದೆ.
ಕಾಸರಗೋಡು ಗಡಿಭಾಗ ಕೆದಂಬಾಡಿ ಎಂಬಲ್ಲಿ ಕಾರಿನಲ್ಲಿ ಬರುತ್ತಿದ್ದಾಗ ಕೊಣಾಜೆ ಪೊಲೀಸರು ಕಾರನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಆದರೆ, ತಾನೊಬ್ಬ ಜಿಲ್ಲಾ ಪಂಚಾಯಿತಿ ಮೆಂಬರ್ ಅನ್ನುವ ದರ್ಪದಲ್ಲಿ ಪೊಲೀಸರೊಂದಿಗೆ ಏಕವಚನದಲ್ಲಿ ಮಾತನಾಡಿದ್ದಾನೆ.
ಯು.ಟಿ ಖಾದರ್ ಜೊತೆ ತಿರುಗಾಡುವ ಹರ್ಷಾದ್, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಲ್ಲದೆ ನನ್ನ ಕಾರನ್ನು ಚೆಕ್ ಮಾಡಲು ನೀವ್ಯಾರು.. ನಾನು ಕೇರಳದವನು. ನಿಮಗೆ ವಾಹನ ಚೆಕ್ ಮಾಡಲು ರೈಟ್ಸ್ ಇಲ್ಲವೆಂದು ಆವಾಜ್ ಹಾಕಿದ್ದಾನೆ.
ಪೊಲೀಸರು ನಾವು ಯಾರ ವಾಹನವನ್ನೂ ಚೆಕ್ ಮಾಡ್ತೀವಿ, ಪ್ರಧಾನ ಮಂತ್ರಿ ವಾಹನ ಬೇಕಾದ್ರೂ ಚೆಕ್ ಮಾಡಬಹುದು. ನೀವು ಕರ್ನಾಟಕದಿಂದ ಈ ರಸ್ತೆ ಮೂಲಕ ಬಂದ ಕಾರಣ ಚೆಕ್ ಮಾಡ್ತೀವಿ.. ಹೋಗಲು ಬಿಡಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಕರ್ನಾಟಕಕ್ಕೆ ಬಂದಿದ್ದ ಹರ್ಷಾದ್, ಹೈವೇಯಿಂದ ಹೋಗುವ ಬದಲಾಗಿ ಒಳದಾರಿ ಕೆದಂಬಾಡಿ ಮೂಲಕ ತೆರಳಿದ್ದು ಪೊಲೀಸರು ನಿಲ್ಲಿಸಿದಾಗ ದರ್ಪ ತೋರಿದ ವಿಡಿಯೋ ಈಗ ವೈರಲ್ ಆಗಿದೆ.
You must be logged in to post a comment Login