LATEST NEWS
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಈಗ ಬಸ್ ಕಂಡೆಕ್ಟರ್…..!
ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಈಗ ಬಸ್ ಕಂಡೆಕ್ಟರ್…..!
ಉಡುಪಿ ಮೇ.28: ಉಡುಪಿ ಶಾಸಕ ರಘುಪತಿ ಭಟ್ ಮುತುವರ್ಜಿಯಲ್ಲಿ ಉಡುಪಿಯಲ್ಲಿ ಸಂಚರಿಸುತ್ತಿರುವ ಉಚಿತ ಬಸ್ ಗೆ ಈಗ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಕಂಡೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಲಾಕ್ ಡೌನ್ 4.0 ನಲ್ಲಿ ಸಡಿಲಿಕೆ ಹಿನ್ನಲೆ ಸಾರ್ವಜನಿಕರಿಗೆ ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದ ಹಿನ್ನಲೆ ಉಡುಪಿ ಶಾಸಕ ರಘುಪತಿ ತಮ್ಮ ಉಸ್ತುವಾರಿಯಲ್ಲಿ ಜೂನ್ 1 ರ ವರೆಗೆ ಉಡುಪಿ ಸಿಟಿಯ ಒಳಗೆ ಉಚಿತ ಬಸ್ ಸೇವೆ ಒದಗಿಸಿದ್ದಾರೆ. ಉಡುಪಿಯ 7 ರೂಟ್ ಗಳಲ್ಲಿ ಸುಮಾರು 12 ಉಚಿತ ಬಸ್ ಸಂಚಾರ ನಡೆಸುತ್ತಿದೆ. ಈ ಬಸ್ ಗಳಲ್ಲಿ ಪಕ್ಷದ ಕಾರ್ಯಕರ್ತರು ಕಂಡಕ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಗ ಉಡುಪಿ ಜಿಲ್ಲಾಪಂಚಾಯತ್ ಅಧ್ಯಕ್ಷರೆ ಬಸ್ ನಲ್ಲಿ ಕಂಡಕ್ಟರ್ ಕೆಲಸ ಮಾಡುತ್ತಿದ್ದಾರೆ. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅವರು ಉಚಿತ ಬಸ್ ಗೆ ಕಂಡೆಕ್ಟರ್ ಆಗಿದ ಉಚಿತ ಸೇವೆ ನೀಡುತ್ತಿದ್ದಾರೆ. ಪ್ರಯಾಣಿಕರನ್ನು ಸ್ಯಾನಿಟೈಸ್ ಮಾಡೋದು, ಮಾಹಿತಿ ಸಂಗ್ರಹಿಸೋದು ಕಂಡೆಕ್ಟರ್ ಕೆಲಸ ಆಗಿದ್ದು, ಈ ಎಲ್ಲಾ ಕೆಲಸನ್ನು ಜಿಲ್ಲಾಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾಡುತ್ತಿದ್ದಾರೆ. ಜಿ.ಪಂ ಅಧ್ಯಕ್ಷರ ಸರಳತೆಗೆ ಜನರು ಫಿದಾ ಆಗಿದ್ದಾರೆ.
You must be logged in to post a comment Login