Connect with us

    KARNATAKA

    ಉಡುಪಿ: ಟೈಮಿಂಗ್ ವಿಚಾರಕ್ಕೆ ಗಲಾಟೆ- ಸಿಟಿ ಬಸ್ ಚಾಲಕನಿಗೆ ಹಲ್ಲೆ ಜೀವ ಬೆದರಿಕೆ…!!

    ಟೈಮಿಂಗ್ ವಿಚಾರಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲಕರಿಬ್ಬರ ನಡುವೆ ಗಲಾಟೆ ನಡೆದು ಚಾಲಕನೋರ್ವನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ಘಟನೆ ಸಂಭವಿಸಿದೆ.

    ಉಡುಪಿ: ಟೈಮಿಂಗ್ ವಿಚಾರಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ಚಾಲಕರಿಬ್ಬರ ನಡುವೆ ಗಲಾಟೆ ನಡೆದು ಚಾಲಕನೋರ್ವನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಕುರಿತು ಘಟನೆ ಸಂಭವಿಸಿದೆ.


    ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಖಾಸಗಿ ಬಸ್ಸಿನ ಚಾಲಕರಾಗಿರುವ ಸುನೀಲ್ ಹಲ್ಲೆಗೊಳಗಾದ ಚಾಲಕನಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. .

    ಇಬ್ಬರು ಚಾಲಕರ ನಡುವೆ ಉಡುಪಿ ಸಿಟಿಬಸ್ ನಿಲ್ದಾಣದಲ್ಲಿ ಟೈಮ್ ವಿಚಾರದಲ್ಲಿ ಗಲಾಟೆ ನಡೆದಿದೆ.

    ಮತ್ತೊಂದು ಖಾಸಗಿ ಬಸ್ ಚಾಲಕ ಪ್ರತಾಪ್ ಎಂಬಾತ ಸುನೀಲ್ ಅವರ ಬಸ್ಸಿಗೆ ತಾನು ಚಲಾಯಿಸುತ್ತಿದ್ದ ಬಸ್ ಅಡ್ಡ ಇಟ್ಟಿದ್ದು, ಈ ಬಗ್ಗೆ ವಿಚಾರಿಸಲು ಹೋದಾಗ ಪ್ರತಾಪನು ಸುನೀಲ್ ಕುಮಾರ್ ಅವರಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

    ಅಲ್ಲದೆ ರಾತ್ರಿ ಮತ್ತೆ ಸಿಟಿಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿಗಳಾದ ಪ್ರತಾಪ್, ಚಂದ್ರ, ವಿನೋದ, ಗಣೇಶ್ ಎಂಬವರು ಸುನೀಲ್ ಅವರಿಗೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿ ಹೋಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply