LATEST NEWS
ಬೆಳ್ಮಣ್ – ಬೈಕ್ ಮೇಲೆ ಬಿದ್ದ ಭಾರೀ ಗಾತ್ರದ ಮರ..ಸವಾರ ಸಾವು..!!
ಉಡುಪಿ ಜುಲೈ 07: ಉಡುಪಿ ಜಿಲ್ಲೆಯಲ್ಲಿ ಮಹಾಮಳೆಗೆ ಮತ್ತೊಂದು ಸಾವು ಸಂಭವಿಸಿದೆ. ಬೈಕ್ ಸವಾರನ ಮೇಲೆ ಭಾರೀ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ತಡರಾತ್ರಿ ಬೆಳ್ಮಣ್ ಪೇಟೆ ಬಳಿ ನಡೆದಿದೆ.
ಮೃತರನ್ನು ಪಿಲಾರುಕಾನದ ಪ್ರವೀಣ್ ಆಚಾರ್ಯ (30) ಎಂದು ಗುರುತಿಸಲಾಗಿದೆ. ಇವರು ಕಾರ್ಕಳದಿಂದ ಗುರುವಾರ ರಾತ್ರಿ ಮನೆಯತ್ತ ತೆರಳುತ್ತಿದ್ದಾಗ ಇವರ ಮೇಲೆ ಬೃಹತ್ ಮರವೊಂದು ಏಕಾಏಕಿ ಉರುಳಿಬಿದ್ದಿದೆ. ಮರದಡಿ ಸಿಲುಕಿ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ , ಪರಿಶೀಲನೆ ನಡೆಸಿದ್ದಾರೆ.
You must be logged in to post a comment Login