Connect with us

LATEST NEWS

ಬರ್ಬರವಾಗಿ ಹತ್ಯೆ ಮಾಡಿ ಮನೆ ಅಂಗಳದಲ್ಲೇ ಬೆಂಕಿ ಹಚ್ಚಿದ ಆರೋಪಿ

ಉಡುಪಿ ಜುಲೈ 24: ಉಡುಪಿಯ ವ್ಯಕ್ತಿಯೊಬ್ಬನ ಕೊಲೆಗೈದ ಆರೋಪಿ ಅವನನ್ನು ಮನೆಯಂಗಳದಲ್ಲೇ ಸುಡಲು ಯತ್ನಿಸಿರುವ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು  ಪುಂಚಲಕಾಡು ನಿವಾಸಿ ಹೇಮಂತ್ ಪೂಜಾರಿ ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಎರ್ಮಾಳ್ ನಿವಾಸಿ ಆಲ್ಬನ್ ಡಿಸೋಜಾ ಎಂದು ಗುರುತಿಸಲಾಗಿದೆ. ಆರೋಪಿ ಹೇಮಂತ್ ಪೂಜಾರಿಯನ್ನು ಮನೆಯಂಗಳದಲ್ಲೇ ಕೊಲೆ ಮಾಡಿ, ನಂತರ ಅಲ್ಲೆ ಸುಡಲು ಮೃತದೇಹದ ಮೇಲೆ ಕಟ್ಟಿಗೆಗಳನ್ನು ಇಟ್ಟು ಬೆಂಕಿ ಹಚ್ಚಿದ್ದಾನೆ.

ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಆರೋಪಿ ಆಲ್ಬನ್ ಡಿಸೋಜಾ ನನ್ನು ವಶಕ್ಕೆ ಪಡೆದಿದ್ದಾರೆ. ಕುಡಿತ ಮತ್ತಿನಲ್ಲಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸ್ಥಳದಲ್ಲಿ ಕಾಪು ಸರ್ಕಲ್ ಮಹೇಶ್ ಪ್ರಸಾದ್ ಸಹಿತ ಶಿರ್ವ ಎಸ್ ಐ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *