Connect with us

    UDUPI

    ದೇಶ ಸಂಪೂರ್ಣ ಅನ್ ಲಾಕ್ ಆದ ನಂತರ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಭಕ್ತರಿಗೆ ಅವಕಾಶ

    ಉಡುಪಿ ಜುಲೈ 2: ದೇಶದಲ್ಲಿ ಎಲ್ಲಾ ಕಡೆ ಅನ್‌ಲಾಕ್ ಆದ ಬಳಿಕ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು ತಿಳಿಸಿದ್ದಾರೆ. ಈ ಮೂಲಕ ಸದ್ಯ ಭಕ್ತರಿಗೆ ಶ್ರೀಕೃಷ್ಣನ ದರ್ಶನದ ಭಾಗ್ಯ ಸಿಗುವ ಸಾಧ್ಯತೆ ಇಲ್ಲವಾಗಿದೆ.


    ಈ ಕುರಿತಂತೆ ಮಾಹಿತಿ ನೀಡಿದ ಅವರು ಶ್ರೀಕೃಷ್ಣ ಮಠದ ಪರಂಪರೆ ಉಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದಲ್ಲಿ ಕೊರೊನಾ ಮಾಹಾಮಾರಿ ನಿರ್ಮೂಲನೆ ಆಗಿ ದೇಶ ಸಂಪೂರ್ಣ ಅನ್ ಲಾಕ್ ಆದ ನಂತರ ದೇಶದೆಲ್ಲೆಡೆ ಪರಿಸ್ಥಿತಿಯನ್ನು ನೋಡಿ ಕೃಷ್ಣಮಠದಲ್ಲಿ ಭಕ್ತರಿಗೆ ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು ಅಲ್ಲಿಯವರೆಗೆ ಎಲ್ಲ ಭಕ್ತರು ಮನೆಯಲ್ಲಿಯೇ ಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿ ಎಂದರು.


    ಶ್ರೀಕೃಷ್ಣಮಠದಲ್ಲಿ ಋತ್ವಿಜರು ನಿರಂತರವಾಗಿ ದೇಶಕ್ಕಾಗಿ ಪ್ರಾರ್ಥನೆಯನ್ನು ಮಾಡುತ್ತಿದ್ದು, ಆಯುರ್ವೇದದಲ್ಲಿ ಹೇಳಿದಂತೆ ಮನಸ್ಸಿನ ದೋಷಗಳೇ ಎಲ್ಲ ರೋಗಗಳಿಗೆ ಕಾರಣ, ಮನಸ್ಸು ಚೆನ್ನಾಗಿದ್ದರೆ ಎಂತಹ ರೋಗವನ್ನೂ ಗೆಲ್ಲಬಹುದು. ಎಲ್ಲರೂ ಮನಸ್ಸನ್ನು ಗಟ್ಟಿಯಾಗಿಸಿ, ಒಳ್ಳೆಯ ಚಿಂತನೆಯನ್ನು ಬೆಳೆಸಿಕೊಳ್ಳಿ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಪರ್ಯಾಯ ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು. ಕೊರೊನಾ ನಿರ್ಮೂಲನೆಗೆ ದೇಶದ ಚಿಕಿತ್ಸಾ ಪದ್ಧತಿ ಫಲಕಾರಿ ಎಂಬುದು ಈಗ ಗೊತ್ತಾಗುತ್ತಿದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply