Connect with us

    LATEST NEWS

    ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆ ಮಾಲಕನ ದಬ್ಬಾಳಿಕೆ ವಿರುದ್ದ ಆಟೋ ಚಾಲಕರ ಪ್ರತಿಭಟನೆ

    ಉಡುಪಿ ನವೆಂಬರ್ 15: ಬನ್ನಂಜೆಯಲ್ಲಿ ನೂತನವಗಿ ನಿರ್ಮಾಣವಾಗಿರುವ ಜಯಲಕ್ಷ್ಮೀ ಸಿಲ್ಕ್ಸ್ ಬಟ್ಟೆ ಅಂಗಡಿಯ ಮಾಲಿಕ ಹಾಗೂ ಸಿಬ್ಬಂದಿಗಳು ರಿಕ್ಷಾ ಚಾಲಕನ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಕ್ರಮಕೈಗೊಳ್ಳಲು ಆಗ್ರಹಿಸಿ ರಿಕ್ಷಾ ಚಾಲಕರ ಸಂಘಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.


    ಜಯಲಕ್ಷ್ಮೀ ಮಾಲೀಕರು ಹಾಗೂ ಶೋ ರೂಂನ ಸಿಬ್ಬಂದಿಗಳು ಆಟೋ ರಿಕ್ಷಾ ಚಾಲಕರೊಬ್ಬರ ಕೀಯನ್ನು ತೆಗೆದು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಕಳೆದ ವಾರ ಶೋರೂಂ ಎದುರು ಗಲಾಟೆ ನಡೆದಿತ್ತು.

    ಇದೀಗ ಉಡುಪಿ ಜಿಲ್ಲೆಯ ರಿಕ್ಷ ಚಾಲಕರ ಸಂಘ ಇಂದು ಪ್ರತಿಭಟನೆ ನಡೆಸಿ ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಡ ಆಟೋ ರಿಕ್ಷಾ ಚಾಲಕನ ಕೀ ತೆಗೆದ ಆತನ ಮೇಲೆ ದಬ್ಬಾಳಿಕೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿರುವ ಆಟೋ ಚಾಲಕರು ಅವರ ಮೇಲೆ ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಯಶೋಧಾ ಆಟೋ ಚಾಲಕ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷರಾದ ದಿವಕರ ಪೂಜಾರಿ ಉಪಸ್ಥಿತರಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply