Connect with us

    KARNATAKA

    ಉಡುಪಿ : ಗ್ಯಾಸ್‌ ಸೋರಿಕೆಗೆ ಬೋಟ್ ಕಾರ್ಮಿಕರು ಅಸ್ವಸ್ಥ -ಅಪತ್ ಭಾಂದವನಾಗಿ ಬಂದು ಜೀವ ರಕ್ಷಿಸಿದ ಈಶ್ವರ್ ಮಲ್ಪೆ..!

    ಗ್ಯಾಸ್‌ ಸೋರಿಕೆಯಿಂದ ಬೋಟ್ ಕಾರ್ಮಿಕರು ಅಸ್ವಸ್ಥರಾದ ಘಟನೆ ಉಡುಪಿ ಮಲ್ಪೆ ಬಂದರಿನಲ್ಲಿ ಸಂಭವಿಸಿದೆ. ಮಾಹಿತಿ ಪಡೆದ ಈಶ್ವರ್ ಮಲ್ಪೆ ಅಪತ್ ಭಾಂದವನಾಗಿ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ ಬಂದು ರಕ್ಷಿಸಿದ್ದಾರೆ. 

    ಉಡುಪಿ : ಗ್ಯಾಸ್‌ ಸೋರಿಕೆಯಿಂದ ಬೋಟ್ ಕಾರ್ಮಿಕರು ಅಸ್ವಸ್ಥರಾದ ಘಟನೆ ಉಡುಪಿ ಮಲ್ಪೆ ಬಂದರಿನಲ್ಲಿ ಸಂಭವಿಸಿದೆ. ಮಾಹಿತಿ ಪಡೆದ ಈಶ್ವರ್ ಮಲ್ಪೆ ಅಪತ್ ಭಾಂದವನಾಗಿ ಸ್ಪಂದಿಸಿ ಸ್ಥಳಕ್ಕೆ ಧಾವಿಸಿ ಬಂದು ರಕ್ಷಿಸಿದ್ದಾರೆ.

    ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯ ಟ್ರಾಲ್‌ ಬೋಟ್‌ನಲ್ಲಿ ಮೀನು ಖಾಲಿ ಮಾಡಲು ಬೋಟ್‌ನ ಸ್ಟೋರೇಜ್‌ಗೆ ಇಳಿದಿದ್ದ ಇಬ್ಬರು ಒಡಿಶಾ ಮೂಲದ ಕಾರ್ಮಿಕರು ಗ್ಯಾಸ್‌ನಿಂದಾಗಿ ಉಸಿರಾಟದ ತೊಂದರೆಗೊಳಗಾದರು.

    ದುರ್ಘಟನೆಯ ಮಾಹಿತಿ ಪಡೆದ ಸಮಾಜ ಸೇವಕ ಅಪತ್‌ ಭಾಂದವ  ಈಶ್ವರ್ ಮಲ್ಪೆ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ.

    ಪ್ರಜ್ಞಾಹೀನರಾಗಿ ಬೋಟ್‌ನ ಸ್ಟೋರೇಜ್‌ನಲ್ಲಿದ್ದ ಬಿದಿದ್ದ ಇಬ್ಬರನ್ನುಪ್ರಥಮ ಚಿಕಿತ್ಸೆ ಮಾಡಿ ತತ್‌ಕ್ಷಣ ಆ್ಯಂಬುಲೆನ್ಸ್‌ ಮೂಲಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇಬ್ಬರು ಕಾರ್ಮಿಕರೂ ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply