Connect with us

    LATEST NEWS

    ಉದಯ ಗಾಣಿಗ ಕೊಲೆ ಪ್ರಕರಣ ಮತ್ತೆ ಇಬ್ಬರು ಆರೋಪಿಗಳ ಬಂಧನ

    ಕುಂದಾಪುರ ಜೂನ್ 08: ಕರಾವಳಿಯಲ್ಲಿ ಭಾರೀ ಸಂಚಲನ ಮೂಡಿಸಿರುವ ಯಡಮೊಗೆಯ ಉದಯ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಭಾವಿ ಬಿಜೆಪಿ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.


    ಬಂಧಿತರನ್ನು ಬಾಲಚಂದ್ರ ಭಟ್ ಮತ್ತು ರಾಜೇಶ್ ಭಟ್ ಎಂದು ಗುರುತಿಸಲಾಗಿದೆ. ಉದಯ ಗಾಣಿಗ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಇಬ್ಬರು ಬಂಧಿಸಲಾಗಿದೆ.

    ಜೂನ್ 5 ರಂದು ರಾತ್ರಿ 8 ಗಂಟೆ ಸುಮಾರಿಗೆ ಉದಯ ಗಾಣಿಗ ಅವರ ಮೇಲೆ ಯಡಮೊಗೆಯ ಹೊಸಬಾಳಿನಲ್ಲಿ ಕಾರು ಹತ್ತಿಸಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ನನ್ನು ಭಾನುವಾರವೇ ಬಂಧಿಸಲಾಗಿತ್ತು.

    ಕೊಳವೆ ಬಾವಿ ವಿಚಾರದಲ್ಲಿ ಉಂಟಾದ ವೈಮನಸ್ಸು ಹಾಗೂ ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಉದಯ್‌ ಅವರು ವಾಟ್ಸ್ಆಪ್‌ನಲ್ಲಿ ಹಾಕಿದ ಸ್ಟೇಟಸ್‌ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ.
    ಕೊಲೆ ನಡೆದ ವೇಳೆ ಈ ಮೂವರಲ್ಲದೇ ಇನ್ನಷ್ಟು ಮಂದಿ ಸ್ಥಳದಲ್ಲಿದ್ದರೆನ್ನುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply