Connect with us

    LATEST NEWS

    ಕಾಡು ಹಂದಿಗಳಿಗೆ ಇಟ್ಟ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕ ಮೃತ್ಯು..!

    ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕ ಮೃತಪಟ್ಟಿದ್ದು, ಇದರಿಂದ ಆತಂಕಗೊಂಡಿರುವ ಜಮೀನಿನ ಮಾಲಕ, ಆ ಯುವಕರ ದೇಹಗಳನ್ನು ತನ್ನ ಜಮೀನಿನಲ್ಲೇ ಹೂತ ಘಟನೆ ಕೇರಳದಲ್ಲಿ ನಡೆದಿದೆ.

    ಪಾಲಕ್ಕಾಡ್: ಕಾಡು ಹಂದಿಗಳಿಗಾಗಿ ಇಟ್ಟಿದ್ದ ವಿದ್ಯುತ್ ಬಲೆಯನ್ನು ತುಳಿದು ಇಬ್ಬರು ಯುವಕ ಮೃತಪಟ್ಟಿದ್ದು, ಇದರಿಂದ ಆತಂಕಗೊಂಡಿರುವ ಜಮೀನಿನ ಮಾಲಕ, ಆ ಯುವಕರ ದೇಹಗಳನ್ನು ತನ್ನ ಜಮೀನಿನಲ್ಲೇ ಹೂತ ಘಟನೆ ಕೇರಳದಲ್ಲಿ ನಡೆದಿದೆ.

    ಮಂಗಳವಾರ ಕೊಡುಂಬುವಿನ ಅಂಬಲಪರಂಬು ಗ್ರಾಮದ ಪಲ್ನೀರಿ ಕಾಲನಿಯಲ್ಲಿ ಇಬ್ಬರು ಯುವಕರ ದೇಹದ ಭಾಗಗಳು ಜಮೀನೊಂದರಲ್ಲಿ ಪತ್ತೆಯಾಗಿದ್ದವು.

    ಈ ಕುರಿತು ಜಮೀನಿನ ಮಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

    ಗಾಬರಿಯಿಂದ ತಾನು ಹಾಗೆ ಮಾಡಿದೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾನೆ.

    ಮೃತ ಯುವಕರ ದೇಹಗಳು ಪತ್ತೆಯಾದ ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್ (52) ಇದೀಗ ಪೊಲೀಸರ ವಶದಲ್ಲಿದ್ದಾನೆ.

    ಆ ಯುವಕರ ಸಾವಿಗೆ ಮತ್ತೇನಾದರೂ ಕಾರಣವಿತ್ತೆ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply