Connect with us

LATEST NEWS

ರಾಜ್ಯ ಗುಪ್ತಚರ ಇಲಾಖೆಯ ಎಎಸ್ಐ ರವೀಂದ್ರನಾಥ ರೈ ವರ್ಗಾವಣೆ

ಮಂಗಳೂರು, ಮೇ 24: ರಾಜ್ಯ ಗುಪ್ತಚರ ಇಲಾಖೆಯ ದಕ್ಷಿಣಕನ್ನಡ ಜಿಲ್ಲೆಯ ಎಎಸ್ಐ ಆಗಿರುವ ರವೀಂದ್ರನಾಥ ರೈ ಅವರ ಸೇವಾವಧಿ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಅವರ ಮಾತೃ ಇಲಾಖೆಯಾದ ಸಿವಿಲ್ ಪೋಲೀಸ್ ಗೆ ಅವರನ್ನು ಮರು ಸೇರ್ಪಡೆಗೊಳಿಸಲಾಗಿದೆ.

ಗುಪ್ತಚರ ಇಲಾಖೆ ವತಿಯಿಂದ ರವೀಂದ್ರನಾಥ ರೈ ಯವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ಗುಪ್ತಚರ ಇಲಾಖೆ ಕಛೇರಿಯಲ್ಲಿ ನಡೆದ ಈ ಸಮಾರಂಭಧಲಿ ಜಿಲ್ಲೆಯ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕದ್ರಿ, ಮೂಡಬಿದಿರೆ,ಬಂದರು ಪೋಲೀಸ್ ಠಾಣೆಯಲ್ಲಿ ವಿವಿಧ ಕರ್ತವ್ಯ ನಿರ್ವಹಿಸಿದ್ದ ರವೀಂದ್ರನಾಥ ಮುಂದಿನ ದಿನಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *