Connect with us

    LATEST NEWS

    ಪೂಂಜಾಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವಷ್ಟು ಪ್ರಾಯವಾಗಿಲ್ಲ, ಅವರಿನ್ನೂ ಬಚ್ಚ – ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

    ಮಂಗಳೂರು ಮೇ 23: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಒಬ್ಬ ರೌಡಿಯಂತೆ ವರ್ತಿಸಿರುವುದು ಬೆಳ್ತಂಗಡಿಯ ಜನತೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಕಿಡಿಕಾರಿದ್ದಾರೆ.


    ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳ್ತಂಗಡಿಯ ಮಾಜಿ ಶಾಸಕ, ದಿ.ವಸಂತ ಬಂಗೇರ ಅವರ ಕಾರ್ಯ ಶೈಲಿ ವಿಭಿನ್ನವಾಗಿತ್ತು. ಅಲ್ಲದೆ ಬಂಗೇರ ಅವರು ನ್ಯಾಯಪರವಾಗಿದ್ದರು. ಆದರೆ ಹರೀಶ್ ಪೂಂಜಾ ಅವರು ಮಿತಿ ಮೀರಿದ್ದಾರೆ. ಪೂಂಜಾ ಅವರು ಒಬ್ಬ ರೌಡಿಶೀಟರ್ ಪರ ನಿಂತು ಪೊಲಿಸರಿಗೆ ಅವಮಾನ ಮಾಡಿದ್ದಾರೆ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೆಲಸವಾಗಿದೆ. ಹಾಗಾಗಿ ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಾಟೆಯಲ್ಲಿ ಬಿಜೆಪಿಯ ಕೈವಾಡ ಇದೆ ಅಂತ ಅನಿಸುತ್ತೆ. ಅಧಿಕಾರಿಗಳ ಮೇಲೆ ದರ್ಪತೊರುವುದು ಈ ಶಾಸಕನ ನಿತ್ಯ ಕೆಲಸವಾಗಿದೆ. ಪೊಲೀಸರು ಬಂಧಿಸಲು ಹೋದಾಗ ಅವರು ಅವಿತು ಕೊಳ್ತಾರೆ. ಹಾಗಾಗಿ ಯಾರು ಹೆದರಿದ್ದಾರೆ ಎಂದು ವಿಡಿಯೋ ತುಣುಕು ನೋಡಿದರೆ ಗೊತ್ತಾಗುತ್ತೆ. ಪೂಂಜಾಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವಷ್ಟು ಪ್ರಾಯವಾಗಿಲ್ಲ, ಅವರಿನ್ನೂ ಬಚ್ಚ. ಬಿಜೆಪಿ ನಾಯಕರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಡಿಸುತ್ತಿದ್ದಾರೆ ಎಂದು ಆರೋಪಿಸಿದರು

    Share Information
    Advertisement
    Click to comment

    You must be logged in to post a comment Login

    Leave a Reply