JYOTHISHYA
ಶ್ರೀ ಮಂಗಳ ಗಾಯತ್ರಿ ದೇವಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

ಮೇಷ:

ಕುಲದೇವತಾರಾಧನೆ ಮಾಡುವುದು ಒಳಿತು. ಮಾಡುವ ಕಾರ್ಯಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇಂದು ಸರಾಗವಾಗಿ ಕೊಟ್ಟಿರುವ ಕೆಲಸವನ್ನು ಬೇಗನೆ ಮಾಡಿ ಮುಗಿಸುತ್ತೀರಿ. ನೀವು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಮಾರ್ಗದರ್ಶನವನ್ನು ಪಡೆಯುವುದು ಸೂಕ್ತ. ನಿಮ್ಮ ವ್ಯಕ್ತಿತ್ವ ರೂಪಿಸುವ ಅವಕಾಶ ಸಿಗಲಿದೆ. ಕ್ರಿಡಾಕೂಟಗಳಲ್ಲಿ ಜಯದ ನಿರೀಕ್ಷೆ ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಷಭ:
ಸಂಗಾತಿಯೊಡನೆ ಪ್ರೇಮದ ಮನಸ್ಥಿತಿಯಲ್ಲಿರುವಿರಿ. ಮನೋವೇದನೆ ಗಳಿಂದ ಕಷ್ಟಗಳು ಹೆಚ್ಚಾಗಲಿದೆ. ಸ್ನೇಹದಲ್ಲಿ ವ್ಯವಹಾರ ಮಾಡುವುದು ಬೇಡ ಇದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಬಂಡವಾಳದ ಸಮಸ್ಯೆಗಳಿಂದ ನಿಮ್ಮ ಯೋಜನೆಗಳು ನಕಾರಾತ್ಮಕ ಫಲಿತಾಂಶ ತರಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆಗೆ ಒತ್ತು ನೀಡಿ. ಕುಟುಂಬದಲ್ಲಿ ಹೆಚ್ಚಿನ ಖರ್ಚುಗಳು ನಿಮಗೆ ಕಠಿಣ ಪರಿಸ್ಥಿತಿ ತಂದೊಡ್ಡುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ:
ಕೋಪ ದ್ವೇಷಗಳು ನಿಮ್ಮ ವ್ಯವಸ್ಥೆಯನ್ನು ಹಾಳುಮಾಡಬಹುದು. ಕೆಲವು ಅವಕಾಶಗಳು ನಿಮ್ಮಿಂದ ಕೈತಪ್ಪಿ ಹೋಗಬಹುದಾದ ಸಾಧ್ಯತೆಯಿದೆ ಎಚ್ಚರವಿರಲಿ. ಪ್ರಚೋದನೆಗೆ ನೀವು ಒಳಗಾಗಬೇಡಿ ನಿಮ್ಮ ಬುದ್ಧಿ ನಿಮ್ಮ ಜೊತೆಯಲ್ಲಿ ಇರಲಿ. ಹಣಕಾಸಿನ ವ್ಯವಹಾರಗಳು ಸಾಧಾರಣ ಪ್ರಮಾಣದಲ್ಲಿ ನಡೆಯಲಿದೆ. ಬರುವ ಅವಕಾಶವನ್ನು ಸೂಕ್ಷ್ಮವಾಗಿ ಅವಲೋಕಿಸಿ ನಂತರ ಪಾಲ್ಗೊಳ್ಳುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ:
ಆಧ್ಯಾತ್ಮಿಕ ತುಡಿತ ನಿಮ್ಮ ವ್ಯವಸ್ಥೆಯಲ್ಲಿ ಕಂಡುಬರಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಸಂಭವಗಳು ಕಾಣಬಹುದು. ಪತ್ನಿಯ ಹಿತಾಸಕ್ತಿಯ ಹಾಗೂ ಅವರ ಪ್ರೇರಣೆಯಿಂದ ಮಾನಸಿಕ ಬಲಿಷ್ಠರಾಗುವಿರಿ. ಹಳೆಯ ಕಷ್ಟಕಾರ್ಪಣ್ಯಗಳಿಗೆ ಇತಿಶ್ರೀ ಹಾಕುವಿರಿ. ದೈಹಿಕ ಸಮತೋಲನಕ್ಕೆ ಒತ್ತು ನೀಡುವುದು ಒಳಿತು. ಖರೀದಿ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:
ಕನಸುಗಳನ್ನು ಕಾಣುತ್ತಾ ಕುಳಿತರೆ ಪ್ರಯೋಜನವಿಲ್ಲ, ಕಂಡಿರುವ ಕನಸನ್ನು ನನಸು ಮಾಡಲು ಪ್ರಯತ್ನ ಪಡಬೇಕಾಗಿರುವುದು ಜೀವನ ಎಂಬುದನ್ನು ಮರೆಯದಿರಿ. ನಿಮ್ಮಲ್ಲಿನ ಚೈತನ್ಯದಿಂದ ಉತ್ತಮ ಜೀವನಶೈಲಿಯನ್ನು ರೂಪಿಸಿಕೊಳ್ಳಲಿದ್ದೀರಿ. ಆರ್ಥಿಕ ವ್ಯವಹಾರಗಳಲ್ಲಿ ಉತ್ತಮ ರೀತಿಯ ಸಾಧನೆಯಾಗಲಿದೆ. ನೀವು ಕುಟುಂಬಕ್ಕಿಂತ ಹೊರಗಡೆಯ ಸ್ನೇಹವನ್ನು ಅತಿಯಾಗಿ ಪ್ರೇಮಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಒಳ್ಳೆಯದಲ್ಲ. ಮನೋಕಾಮನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಂಗಾತಿಯ ಮಾತುಗಳು ಈ ದಿನ ನಿಮಗೆ ಸಂತೋಷ ತರಿಸುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕನ್ಯಾ :
ಮಾಡುವ ಕಾರ್ಯಗಳು ನಿಮಗೆ ಪ್ರಶಂಸೆ ತಂದುಕೊಡುತ್ತದೆ. ಕೆಲವರು ನಿಮ್ಮ ಹಿಂದೆ ದುಂಬಾಲು ಬೀಳುವರು ಅವರ ಹೊಗಳಿಕೆಗೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡಬೇಡಿ. ಆಡಂಬರದ ಜೀವನ ಶೈಲಿಯನ್ನು ನಿಯಂತ್ರಿಸುವುದು ಒಳ್ಳೆಯದು. ಮಾತು ಹಾಗೂ ಕೃತಿಯಲ್ಲಿ ನೈಜತೆಯನ್ನು ರೂಡಿಸಿಕೊಳ್ಳಿ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹಲವಾರು ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಬಾಕಿ ಇರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಸೂಕ್ತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ತುಲಾ :
ನಿಮ್ಮ ವ್ಯವಹಾರಗಳಲ್ಲಿ ಹೆಚ್ಚಿನದಾಗಿ ಅಪಹಾಸ್ಯ, ಟೀಕೆ-ಟಿಪ್ಪಣಿಗಳು ಬರಬಹುದು ಇವುಗಳಿಂದ ವಿಚಲಿತರಾಗದೆ ನಿಮ್ಮ ಪ್ರಯತ್ನವನ್ನು ಮುಂದುವರಿಸುವುದು ಒಳಿತು. ಸಹವಾಸದೋಷ ಒಳ್ಳೆಯದಾಗಿರಲಿ ಇದು ನಿಮಗೆ ಒಳಿತನ್ನೇ ತರಬಹುದು. ಅನಗತ್ಯವಾಗಿ ಇಬ್ಬರ ಜಗಳದಲ್ಲಿ ಮಧ್ಯಸ್ಥಿಕೆಯ ವಹಿಸಿಕೊಳ್ಳಬಹುದು ಸರಿಯಲ್ಲ, ಇದು ನಿಮ್ಮ ವರ್ಚಸ್ಸಿಗೆ ಕುಂದು ತರಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ವೃಶ್ಚಿಕ :
ಆರ್ಥಿಕ ವ್ಯವಹಾರ ಮಧ್ಯಮ ಗತಿಯಲ್ಲಿ ನಡೆಯಲಿದೆ. ಬಂಧುಗಳಿಂದ ನಿಮಗೆ ಅಹಿತಕರವಾದ ಪ್ರಸ್ತಾಪಗಳು ಬರಬಹುದು. ಇಷ್ಟವಿಲ್ಲದ ಕಾರ್ಯವನ್ನು ಸಾರಾಸಗಟಾಗಿ ತಳ್ಳಿ ಹಾಕಿ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಸುಧಾರಣೆಗಳು ಕಂಡುಬರಲಿವೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:
ಶತ್ರು ವರ್ಗದಿಂದ ಉಪಟಳ ಹೆಚ್ಚಾಗಲಿದೆ ಆದಷ್ಟು ಸೂಕ್ಷ್ಮರೀತಿಯಿಂದ ವರ್ತಿಸುವುದು ಒಳಿತು. ಯೋಜನೆಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ವ್ಯವಹಾರಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭ ತಂದು ಕೊಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ವಿರುದ್ಧ ಪ್ರಶ್ನೆಗಳು ಉದ್ಭವಿಸಲಿದೆ ಉತ್ತರ ನೀಡುವುದು ಒಳಿತು. ಆತ್ಮೀಯ ಗೆಳೆಯರು ನಿಮಗೆ ಸಹಕಾರವನ್ನು ನೀಡಲಿದ್ದಾರೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಕರ:
ಕುಟುಂಬದಲ್ಲಿ ಶುಭಸುದ್ದಿ ಹಾಗೂ ಸಂತೋಷದ ವಾತಾವರಣ ಕೂಡಿರುತ್ತದೆ. ಹಿರಿಯರು ನಿಮಗೆ ಮುಂದಿನ ಭವಿಷ್ಯಕ್ಕೆ ಏಳಿಗೆಗಾಗಿ ಸಹಕಾರ ನೀಡುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ ಆದಷ್ಟು ಮುತುವರ್ಜಿ ವಹಿಸುವುದು ಸೂಕ್ತ. ವಿನಾಕಾರಣ ಕೆಲವರಿಂದ ತಡೆಹಿಡಿದಿರುವ ಕಾರ್ಯಕ್ರಮಗಳು ಈ ದಿನ ಚಾಲನೆ ದೊರೆಯಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭದ ಲೆಕ್ಕಾಚಾರ ತುಂಬಾ ಉತ್ತಮವಾಗಿದ್ದು ಲಾಭಂಶದೆಡೆಗೆ ಕೊಂಡೊಯ್ಯುವುದು ನಿಶ್ಚಿತ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕುಂಭ:
ಆಕಸ್ಮಿಕವಾಗಿ ಎದುರಾಗುವ ಕೆಲವು ಸಂಕಷ್ಟಗಳಿಂದ ಮನಸ್ಸು ವಿಚಲಿತವಾಗುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಆದಷ್ಟು ನಿಗಾ ಇಡಿ. ಅನಗತ್ಯ ಖರ್ಚುಗಳು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲಿದೆ. ಮನೆ ದೇವರ ದರ್ಶನದ ಭಾಗ್ಯ ನಿಮಗೆ ಸಿಗಲಿದೆ. ಯೋಜನೆಗಳನ್ನು ಪರಿಣಾಮತ್ಮಕವಾಗಿ ಬೆಳೆಸಲು ನಿಮ್ಮ ಬದ್ಧತೆ ಪ್ರಮುಖವಾಗಿದೆ, ಹಿರಿಯರ ಮತ್ತು ಸ್ನೇಹಿತರ ಸಹಾಯ ಪಡೆದು ಮುನ್ನುಗ್ಗಿ. ಸಾಲದ ಸಂಕೋಲೆಯಿಂದ ಪಾರಾಗಲು ಆದಷ್ಟು ಆರ್ಥಿಕ ಚಟುವಟಿಕೆಗಳನ್ನು ತ್ವರಿತಗೊಳಿಸಿ ಮತ್ತು ಉಳಿತಾಯದ ಯೋಜನೆಗೆ ವ್ಯವಸ್ಥೆ ಮಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮೀನ:
ಸಂಗಾತಿಯ ಮನಸ್ಸಿನಲ್ಲಿರುವ ಗೊಂದಲಗಳನ್ನು ಸರಿಪಡಿಸುವ ಕಾರ್ಯ ನಿಮ್ಮಿಂದ ಆಗಲಿದೆ. ಕೆಲಸದಲ್ಲಿ ನೀವು ಉನ್ನತವಾದುದನ್ನು ಸಾಧಿಸುವ ಹಂಬಲ ಇರಲಿದೆ. ಮೇಲಾಧಿಕಾರಿ ವರ್ಗದಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆಗಳು ಕಾಣಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262