Connect with us

    KARNATAKA

    ಗೋಕರ್ಣ ಬೀಚ್‌ನಲ್ಲಿ ಮೂವರು ಯುವತಿಯರ ರಕ್ಷಣೆ..!

    ಕಾರವಾರ : ಸಮುದ್ರದಲ್ಲಿ ಅಲೆಗೆ ಕೊಚ್ಚಿಹೋಗಿದ್ದ ಮೂವರು ಯುವತಿಯರನ್ನು ಜೀವ ರಕ್ಷಕ ದಳ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.

    ಬೆಂಗಳೂರು ಮೂಲದ ಮೂವರು ಪ್ರವಾಸಿಗರಾದ ಸ್ಮಿತಾ ರವಿಚಂದ್ರನ್ (23) ನಿಹಾರಿಕಾ ಗಿರಿ (22) ಪವಿತ್ರ ಸುಂದರ್ (22)ರಕ್ಷಣೆಗೊಳಗಾದ ಯುವತಿಯರಾಗಿದ್ದಾರೆ. ಉತ್ತರ ಕನ್ನಡದ ಗೋಕರ್ಣ ಪ್ರವಾಸಕ್ಕಾಗಿ ಬಂದಿದ್ದ ಇದರು ಭಾನುವಾರ ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದಾಗ ದುರ್ಘಟನೆ ನಡೆದಿದೆ. ಈಜುವ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ನವೀನ್ ಅಂಬಿಗ, ಮಂಜುನಾಥ್ ಹರಿಕಂತ್ರ ತಕ್ಷಣ ರಕ್ಷಣೆಗೆ ಧಾವಿಸಿ ಜೆಟ್ ಸ್ಕೀ ಮೂಲಕ ಸಹಾಯ ಮಾಡಿ ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply