LATEST NEWS
ರಂಗಭೂಮಿ ಕಲಾವಿದ, ಟಿವಿ ನಿರೂಪಕ ರಾಘವೇಂದ್ರ ನೈರಿ ಸಾಲಿಗ್ರಾಮ ನಿಧನ..!
ಉಡುಪಿ : ಟಿವಿ ನಿರೂಪಕ, ರಂಗಭೂಮಿ ಕಲಾವಿದ ರಾಘವೇಂದ್ರ ನೈರಿ (40) ಸಾಲಿಗ್ರಾಮ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿರುತ್ತಾರೆ.
ಸಾಲಿಗ್ರಾಮ ಬಡಾಹೋಳಿಯ ಕೇಶವ ನೈರಿ ಮತ್ತು ಬೇಬಿ ನೈರ್ತಿ ದಂಪತಿಗಳ ಪುತ್ರರಾಗಿದ್ದ ರಾಘವೇಂದ್ರ ನೈರಿಯವರು ಸ್ಥಳೀಯ ಟಿವಿ ಚಾನೆಲನಲ್ಲಿ ಹಲೋ ಡಾಕ್ಟರ್ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮ ನಿರೂಪಣೆ ಮಾಡಿದ್ದರು. ಕಲಾರಂಗ ಕಾರ್ಕಡ ಮತ್ತು ಕಲಾವೇದಿಕೆ ಸಾಲಿಗ್ರಾಮದ ನಾಟಕ ತಂಡದಲ್ಲಿ ನಾಯಕಿ ಪಾತ್ರ ಮಾಡಿ ಜನಮನ ಸೂರೆ ಮಾಡಿದ್ದರು.ಹೆಂಡತಿ ಮತ್ತು ಓರ್ವ ಪುತ್ರಿ ಹಾಗೂ ತಂದೆ, ತಾಯಿ, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನುಅಗಲಿರುತ್ತಾರೆ.
You must be logged in to post a comment Login