Connect with us

    LATEST NEWS

    ತಲ್ವಾರ್ ಝಳಪಿಸಿ ಗೋ ಶಾಲೆಯಿಂದ ದನಗಳ ಅಪಹರಣ : ಇಬ್ಬರು ಗೋಕಳ್ಳರ ಬಂಧನ

    ತಲ್ವಾರ್ ಝಳಪಿಸಿ ಗೋ ಶಾಲೆಯಿಂದ ದನಗಳ ಅಪಹರಣ : ಇಬ್ಬರು ಗೋಕಳ್ಳರ ಬಂಧನ

    ಮಂಗಳೂರು, ಎಪ್ರಿಲ್ 05 : ಬಂಟ್ವಾಳ ತಾಲೂಕಿನ ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕೈರಂಗಳ ಅಮೃತಾ ಧಾರ ಗೋಶಾಲೆಯಿಂದ ತಲ್ವಾರ್ ತೋರಿಸಿ ಗೋ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಪ್ರಮುಖ ಆರೋಪಿಗಳನ್ನು ಕೊನೆಗೂ ಪೋಲಿಸರು ಬಂಧಿಸಿದ್ದಾರೆ.

    ಮಂಗಳೂರು ದಕ್ಷಿಣ ರೌಡಿ ನಿಗ್ರಹ ಪೊಲೀಸ್ ದಳದ ಪೋಲಿಸರು ಕಾರ್ಯಾಚರಣೆ ನಡೆಸಿ ಈ ಗೋಕಳ್ಳರನ್ನು ಬಂಧಿಸಿದ್ದಾರೆ.

    ಬಂಧಿತರನ್ನು ಮೋನಚ್ಚ ಯಾನೆ ಅಹ್ಮದ್ ಕುಂಞ,ಬಶೀರ್  ಎಂದು ಗುರುತ್ತಿಸಲಾಗಿದೆ.

    ಮಾರ್ಚ್29 ರಂದು ಕೊಣಾಜೆ  ಕೈರಂಗಳ ಗೋಶಾಲೆಯಿಂದ ಈ  ಗೋ ಅಪಹರಣವಾಗಿತ್ತು.

    ಗೋಶಾಲೆಯ ಸಿಬ್ಬಂದಿ ಗೆ ತಲ್ವಾರ್ ತೋರಿಸಿ ಆರೋಪಿಗಳು ಗೋವುಗಳನ್ನು ಅಪಹರಣ ಮಾಡಿದ್ದರು.

    ಗೋ ಅಪಹರಣ ಖಂಡಿಸಿ ಗೋಶಾಲೆಯಲ್ಲಿ ಗೋಶಾಲೆ ಪ್ರಮುಖ್ ರಾಜಾರಾಂ ಭಟ್ಅವರ ನೇತೃತ್ವದಲ್ಲಿ ಅಮರಾಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗಿತ್ತು.

    ಬುಧವಾರ ವಿವಿಧ ಹಿಂದೂ ಪರ ಸಂಘಟನೆಗಳು ಸೇರಿ ಜಿಲ್ಲಾಧಿಕಾರಿ ಹಾಗೂ ಪೋಲಿಸ್ ಆಯುಕ್ತಕರಿಗೆ ಮನವಿ ಸಲ್ಲಿಸಿ, ಹೋರಾಟವನ್ನು ತೀವೃಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಪೋಲಿಸರು ಒತ್ತಡಕ್ಕೆ ಮಣಿದು ಕೊನೆಗೂ ಗೋವು ಕಳ್ಳರನ್ನು ಬಂಧಿಸಿದ್ದಾರೆ.

    ಆದರೆ ಇದರ ಹಿಂದಿನ ನಿಜವಾದ ಸೂತ್ರಧಾರಿಗಳನ್ನು ಬಂಧಿಸಬೇಕೆಂದು ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply