LATEST NEWS
ಕರೊನಾ ಲಸಿಕೆಯಿಂದ ಏನಾದರೂ ಆದರೆ ಜಿಲ್ಲಾಧಿಕಾರಿಯೇ ಹೊಣೆ …!?
ಹುಬ್ಬಳ್ಳಿ, ನವೆಂಬರ್ 28: ಕರೊನಾ ಲಸಿಕೆಯಿಂದ ಏನಾದರೂ ಆದರೆ ಜಿಲ್ಲಾಧಿಕಾರಿಯೇ ಹೊಣೆ ಎಂಬ ಪತ್ರಕ್ಕೆ ಸ್ವತಃ ಡಿಸಿಯೇ ಸಹಿ ಮಾಡಿದ ಘಟನೆ ಹುಬ್ಬಳಿಯಲ್ಲಿ ನಡೆದಿದೆ.
ಇಲ್ಲೊಬ್ಬ ವ್ಯಕ್ತಿ ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್ ಗತಿ? ಎಂದು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಅವರನ್ನೇ ಪ್ರಶ್ನಿಸಿದ್ದಾನೆ. ಇದಕ್ಕೆ ಡಿಸಿ ಲಸಿಕೆ ತೆಗೆದುಕೊಳ್ಳುವುದರಿಂದ ಏನೂ ಆಗುವುದಿಲ್ಲ ಎಂದು ಆತನಿಗೆ ಮನವರಿಕೆ ಮಾಡಿಸಿದ್ದಾರೆ. ಇದರಿಂದ ಸಮಾಧಾನಗೊಳ್ಳದ ಆತ ನನಗೇನೂ ಆಗುವುದಿಲ್ಲ ಎಂದು ಬರೆದು ಕೊಡಿ, ಆಗ ಮಾತ್ರ ಲಸಿಕೆ ಹಾಕಿಸಿಕೊಳ್ಳುತ್ತೇನೆ ಎಂಬುದಾಗಿ ಹೇಳಿದ್ದಾನೆ.
ಈ ವೇಳೆ ನಾನು ಸಹಿ ಮಾಡಿಕೊಡುತ್ತೇನೆ, ನೀವು ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದ ಜಿಲ್ಲಾಧಿಕಾರಿ, ಕೂಡಲೇ ಪತ್ರ ಬರೆದುಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿ ಅದಕ್ಕೆ ಸಹಿ ಮಾಡಿದ್ದಾರೆ.
ಪ್ರಶ್ನೆ ಕೇಳಿದ ವ್ಯಕ್ತಿಗೆ ಲಸಿಕೆ ಹಾಕಿಸಿದ್ದಾರೆ. ಈ ಸಂದರ್ಭಕ್ಕೆ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಉಪ ವಿಭಾಗಾಧಿಕಾರಿ ಡಾ.ಬಿ. ಗೋಪಾಲಕೃಷ್ಣ ಕೂಡ ಸಾಕ್ಷಿಯಾಗಿದ್ದು, ಅವರು ಕೂಡ ಸಹಿ ಮಾಡಿದ್ದಾರೆ.
You must be logged in to post a comment Login