KARNATAKA
ಬೈಕ್ ಸವಾರನ ಜೀವ ತೆಗೆದ ನಡು ರಸ್ತೆಯಲ್ಲಿ ಹಾಕಿದ್ದ ಬ್ಯಾನರ್ ಕಂಬ..!
ದಾವಣಗೆರೆ : ಬ್ಯಾನರ್ ಅಳವಡಿಕೆಗಾಗಿ ನಡು ರಸ್ತೆಲ್ಲಿ ನೆಟ್ಟ ಕಂಬದಿಂದ ಬೈ ಸವಾರ ಜೀವಕಳಕೊಂಡ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬಡ ಬೈಕ್ ಸವಾರ ಜೀವ ತೆತ್ತಿದ್ದಾನೆ. ಗಣೇಶ್ (40) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ರಸ್ತೆ ಮಧ್ಯೆ ಬ್ಯಾನರ್ ಕಟ್ಟಲು ಈ ಕಂಬ ನೆಡಲಾಗಿತ್ತು. ಅದನ್ನು ಗಮನಿಸಿದೆ ಬಂದ ಟೆಂಪೋ ಟ್ರಾವೆಲರ್ ವಾಹನ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬ ಮುರಿದು ಎದುರಿನಿಂದ ಬಂದ ಬೈಕ್ ಸವಾರನ ತಲೆಯ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಡು ರಸ್ತೆಯಲ್ಲಿಕಂಬ ನೆಟ್ಟವರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದು, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಘಟನೆ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login