BANTWAL
ದೇವಸ್ಥಾನಕ್ಕೆ ಕಳ್ಳರ ಕನ್ನ, ಲಕ್ಷಾಂತರ ಮೌಲ್ಯದ ಸೊತ್ತು ಕಳವು
ಬಂಟ್ವಾಳ, ಸೆಪ್ಟೆಂಬರ್ 11 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ದೇವಸ್ಥಾನಕ್ಕೆ ಕಳ್ಳರು ಕನ್ನ ಹಾಕಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಪೆರ್ನೆ ಸಮೀಪದ ಕಡೆ ಶಿವಾಲಯ ದೇವಾಲಯಕ್ಕೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ದೇವಸ್ಥಾನದ ಸಿ.ಸಿ.ಕ್ಯಾಮರಾ ಪುಡಿಗೈದಿದ್ದಾರೆ. ದೇವಸ್ಥಾನದ ಒಳಗಿದ್ದ ಬೆಲೆ ಬಾಳುವ ದೇವರ ಮೂರ್ತಿಗಳು, ಬಂಗಾರ ಬೆಳ್ಳಿಯ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತು ಕಳವು ಮಾಡಿ ಪರಾರಿಯಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.
You must be logged in to post a comment Login