DAKSHINA KANNADA
ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಖ್ಯಾತ ತಮಿಳು ನಿರ್ದೇಶಕ ಅಟ್ಲಿ ಭೇಟಿ
ಸುಬ್ರಹ್ಮಣ್ಯ: ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತಮಿಳಿನ ಸೂಪರ್ ಸ್ಟಾರ್ ನಿರ್ದೇಶಕ ಅಟ್ಲೀ ದಂಪತಿ (ಅರುಣ್ ಕುಮಾರ್) ಭೇಟಿ ನೀಡಿ ದೇವರ ದರ್ಶನ ಪಡೆದರು.
ತಮಿಳಿನಲ್ಲಿ ಸೂಪರ್ ಹಿಟ್ ಫಿಲ್ಮ್ ಗಳನ್ನು ನೀಡಿರುವ ಅಟ್ಲೀ 2019ರ ತಮಿಳಿನ ಬ್ಲಾಕ್ ಬಾಸ್ಟರ್ ಸಿನೆಮಾ ವಿಜಯ್ ಅಭಿನಯದ ಬಿಜಿಲ್ ಮೂಲಕ ದೊಡ್ಡ ಅಲೆಯನ್ನೇ ನಿರ್ಮಿಸಿದ್ದರು.
ಅಟ್ಲೀ ತಮ್ಮ ಪತ್ನಿ ಕೃಷ್ಣ ಪ್ರಿಯಾ ಅವರ ಜೊತೆ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ನಂತರ ದೇವಳದಿಂದ ನಡೆಯುವ ಅನ್ನದಾನ ನಿಧಿಗೆ ₹ 10 ಲಕ್ಷ ಮೊತ್ತದ ಚೆಕ್ ಅನ್ನು ಅವರು ಹಸ್ತಾಂತರಿಸಿದರು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಇದ್ದರು.
You must be logged in to post a comment Login