Connect with us

    National

    ಸರಳವಾಗಿ ನೆರವೇರಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಪುತ್ರಿ ವೀಣಾ ಮದುವೆ….!!

    ತಿರುವನಂತಪುರಂ: ಡಿವೈಎಫ್ಐ ನ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ರಿಯಾಜ್ ಅವರ ಮದುವೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ. ವೀಣಾ ಅವರೊಂದಿಗೆ ಇಂದು ತಿರುವನಂತಪುರದಲ್ಲಿ ನೆರವೇರಿತು.


    ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ನಿವಾಸ, ತಿರುವನಂತಪುರದ ‘ಕ್ಲಿಫ್‌ ಹೌಸ್‌’ನಲ್ಲಿ ಬೆಳಗ್ಗೆ 10.30ರಲ್ಲಿ ಅತ್ಯಂತ ಸರಳವಾಗಿ ಶುಭ ಸಮಾರಂಭ ಈ ಕಾರ್ಯಕ್ರಮ ನಡೆಯಿತು. ಪಿಣರಾಯಿ ವಿಜಯನ್‌ ಮತ್ತು ಮೊಹಮ್ಮದ್‌ ರಿಯಾಜ್‌ ಅವರ ಕೆಲವೇ ಕುಟುಂಬಸ್ಥರು, ಸ್ನೇಹಿತರು ಇದರಲ್ಲಿ ಪಾಲ್ಗೊಂಡಿದ್ದರು.


    ಕೊರೊನಾ ಮಾರ್ಗಸೂಚಿಗಳ ಅನ್ವಯ 50ಕ್ಕಿಂತಲೂ ಕಡಿಮೆ ಮಂದಿ ವಿವಾಹಕ್ಕೆ ಸಾಕ್ಷಿಯಾದರು. ವೀಣಾ ಅವರು ಬೆಂಗಳೂರಿನ ‘ಎಕ್ಸೊಲೋಜಿಕಲ್‌ ಸೊಲ್ಯೂಷನ್‌ ಪ್ರೈವೆಟ್‌ ಲಿಮಿಟೆಡ್‌’ ಎಂಬ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿಯಾಗಿದ್ದಾರೆ.

    ಇನ್ನು ರಿಯಾಜ್‌ ಅವರು ಸಿಪಿಐ(ಎಂ)ನ ಯುವ ಘಟಕ, ಡಿವೈಎಫ್‌ಐ ರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ. ರಿಯಾಜ್‌, ಕೇರಳದ ಐಎಎಸ್‌ ಅಧಿಕಾರಿ ಪಿ.ಎಂ ಅಬ್ದುಲ್‌ ಖಾದರ್‌ ಮತ್ತು ಕೆ.ಎಂ ಆಯೆಷಾ ಬಿ ಅವರ ಪುತ್ರ. ಟಿ. ವೀಣಾ ಮತ್ತು ರಿಯಾಜ್‌ ಅವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಈ ಮದುವೆ ಜರುಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply