Connect with us

    KARNATAKA

    2024 ರ ಇಂಟರ್ ಸರ್ವಿಸಸ್ ಕ್ರಿಕೆಟ್ ಕಪ್ ಗೆದ್ದ ನೈರುತ್ಯ ರೈಲ್ವೆ ಅಧಿಕಾರಿಗಳ ತಂಡ..! 

    ಹುಬ್ಬಳ್ಳಿ :  ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬಹು ನಿರೀಕ್ಷಿತ ಇಂಟರ್ ಸರ್ವಿಸಸ್ ಕ್ರಿಕೆಟ್ ಕಪ್-2024 ರಲ್ಲಿ ನೈರುತ್ಯ ರೈಲ್ವೆ (SWR) ಅಧಿಕಾರಿಗಳ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿದೆ.

    ಐಎಎಸ್, ಐಎಎಸ್, ಐಎಫ್ಎಸ್, ಐಆರ್ ಎಸ್, (ಐಟಿ), ಐಆರ್ ಎಸ್ (ಕಸ್ಟಮ್ಸ್), ಮತ್ತು ನೈರುತ್ಯ ರೈಲ್ವೆಯ ಅಧಿಕಾರಿಗಳ ತಂಡ ಸೇರಿದಂತೆ ವಿವಿಧ ಪ್ರತಿಷ್ಠಿತ ಸೇವೆಗಳನ್ನು ಪ್ರತಿನಿಧಿಸುವ ಆರು ತಂಡಗಳು ಕುತೂಹಲ ಪೈಪೋಟಿಯಿಂದ ಕೂಡಿದ ಈ ಪಂದ್ಯಾವಳಿಯಲ್ಲಿ ತಮ್ಮ ಕ್ರಿಕೆಟ್ ಸಾಮರ್ಥ್ಯ ಮತ್ತು ತಂಡದ ಕೌಶಲ್ಯವನ್ನು ಪ್ರದರ್ಶಿಸಿದವು.

    ಅಂತಿಮ ಪಂದ್ಯವು ಕೂತೂಹಲ ಪೈಪೋಟಿಯ ಹೋರಾಟಕ್ಕೆ ಸಾಕ್ಷಿಯಾಯಿತು, ಅಂತಿಮವಾಗಿ, ನೈರುತ್ಯ ರೈಲ್ವೆ ಅಧಿಕಾರಿಗಳ ತಂಡವು ವಿಜಯಶಾಲಿಯಾಗಿ ಹೊರಹೊಮ್ಮಿ, ಚಾಂಪಿಯನ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಆಡಳಿತ ಸೇವೆಯ (ಐಎಎಸ್) ಅಧಿಕಾರಿಗಳು ಪಂದ್ಯಾವಳಿಯ ಉದ್ದಕ್ಕೂ ಶ್ಲಾಘನೀಯ ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿ, ಅಂತಿಮವಾಗಿ ಫೈನಲ್‌ನಲ್ಲಿ ರನ್ನರ್-ಅಪ್‌ ಸ್ಥಾನವನ್ನು ಗಳಿಸಿದರು.

    ವಿಜಯಿ ತಂಡ ನೈರುತ್ಯ ರೈಲ್ವೆ ಅಧಿಕಾರಿಗಳ ತಂಡ ಮತ್ತು ಅವರ ಪ್ರತಿಭಾನ್ವಿತ ಆಟಗಾರರನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply