Connect with us

BANTWAL

ಕಲ್ಲಡ್ಕ ಶಾಲೆಯ ಅನುದಾನ ಕಡಿತದ ಹಿಂದೆ ಸಚಿವ ರಮನಾಥ ರೈ : ಸಿಎಂ ಗೆ ಬರೆದ ಪತ್ರ ಬಹಿರಂಗ

ಕಲ್ಲಡ್ಕ ಶಾಲೆಯ ಅನುದಾನ ಕಡಿತದ ಹಿಂದೆ ಸಚಿವ ರಮನಾಥ ರೈ : ಸಿಎಂ ಗೆ ಬರೆದ ಪತ್ರ ಬಹಿರಂಗ

ಬಂಟ್ವಾಳ, ಡಿಸೆಂಬರ್ 13 ; ಬಂಟ್ವಾಳದ ಕಲ್ಲಡ್ಕದ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ನೇತೃತ್ವದ ಎರಡು ಶಾಲೆಗಳಿಗೆ ಅನುದಾನ ಕಡಿತಗೊಳಿಸಲು ಸಚಿವ ರಮಾನಾಥ ರೈ ಒತ್ತಡ ಹಾಕಿದ್ದರು ಎನ್ನುವ ಅಂಶ ಇದೀಗ ಬಯಲಾಗಿದೆ.

ಈ ಸಾಕ್ಷಿ ಎಂಬಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ. ರಮನಾಥ ರೈ ಅವರು ಸ್ವತ ಮುಖ್ಯಮಂತ್ರಿಗೆ ಬರೆದ ಪತ್ರ ಬಹಿರಂಗಗೊಂಡಿದೆ.

ಸಾರ್ವಜನಿಕ ಹಿತದೃಷ್ಡಿಯಿಂದ ಅನುದಾನ ಕೊಡುವುದು ತಪ್ಪೆಂದು ಹೇಳಿ ರಮಾನಾಥ ರೈ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲಿಖಿತ ಮನವಿ ಸಲ್ಲಿಸಿದ್ದರು.

ಇದೀಗ ಬಿಜೆಪಿ ಮುಖಂಡರುಗಳು ಬಿ, ರಮನಾಥ ರೈ ಅವರ ಮೇಲೆ ಹರಿಹಾಯ್ದಿದ್ದಾರೆ.

ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮಕ್ಕಳ ಅನ್ನ ಕಸಿದ ಸಚಿವ ರಮಾನಾಥ ರೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಕಲ್ಲಡ್ಕದ ಶಾಲೆಯ ಮಕ್ಕಳು ಅನ್ನದ ಬಟ್ಟಲು ಹಿಡಿದು ಬಿ.ಸಿ ರೋಡಿನಲ್ಲಿ ಪ್ರತಿಭಟನೆ ನಡೆಸಿದಾಗ, ಅನುದಾನ ಕಡಿತಗೊಳಿಸಿದ್ದು ತಾನಲ್ಲ.

ಮುಜರಾಯಿ ಇಲಾಖೆ ಅಂತ ಸಚಿವ ರಮಾನಾಥ ರೈ ಹೇಳಿದ್ದರು.

ಇದೀಗ ಸಚಿವ ರೈ ಸ್ವತಃ ತಮ್ಮ ಲೆಟರ್ ಹೆಡ್ ನಲ್ಲಿ ಸಿದ್ರಾಮಯ್ಯರಿಗೆ ಅರ್ಜಿ ಬಿಡುಗಡೆಯಾಗಿದ್ದು ಸಚಿವರ ಇಬ್ಬಗೆಯ ನಡೆ ತೀವ್ರ ಟೀಕೆಗೆ ಗುರಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *