Connect with us

LATEST NEWS

ಧರ್ಮಸಂಸತ್ ಊಟ ನೀಡದ ಕೊಲ್ಲೂರು ದೇವಸ್ಥಾನ – ರಾಜ್ಯ ಸರಕಾರದ ಪಿತೂರಿ

ಧರ್ಮಸಂಸತ್ ಊಟ ನೀಡದ ಕೊಲ್ಲೂರು ದೇವಸ್ಥಾನ – ರಾಜ್ಯ ಸರಕಾರದ ಪಿತೂರಿ

ಉಡುಪಿ ಜನವರಿ 9: ಉಡುಪಿಯಲ್ಲಿ ಡಿಸೆಂಬರ್ 24,25,26 ರಂದು ಉಡುಪಿಯಲ್ಲಿ ನಡೆದಿದ್ದ ಧರ್ಮ ಸಂಸತ್ತಿಗೆ ಕೊಲ್ಲೂರು ಕ್ಷೇತ್ರದಿಂದ ಊಟದ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿತ್ತು, ಆದರೆ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ನಮ್ಮ ಮನವಿಯನ್ನು ನಿರಾಕರಿಸಿತ್ತು ಎಂದು ವಿಶ್ವಹಿಂದೂ ಪರಿಷತ್ ಆರೋಪಿಸಿದೆ.

ದೇಶದ ನಾನಾ ಭಾಗಗಳಿಂದ ಸಾವಿರಾರು ಸಂತರು ಭಾಗವಹಿಸಿದ್ದ ಧರ್ಮಸಂಸತ್ ಧಾರ್ಮಿಕ ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆ ಮಾಡಲು ದೇವಸ್ಥಾನ ಮಂಡಳಿ ನಿರಾಕರಿಸಿತ್ತು. ಆದರೆ ಸರಕಾರದ ಸಾಧನಾ ಸಮಾವೇಶಕ್ಕೆ ದೇವಸ್ಥಾನ ಮಂಡಳಿ ಊಟದ ವ್ಯವಸ್ಥೆ ಮಾಡಿದೆ ಎಂದು ಆರೋಪಿಸಿದರು. ಸರಕಾರದ ಸಮಾವೇಶಕ್ಕೆ ಬಂದಿದ್ದ ಸುಮಾರು 15 ಸಾವಿರಕ್ಕೂ ಅಧಿಕ ಮಂದಿಗೆ ಕೊಲ್ಲೂರು ದೇವಸ್ಥಾನದಿಂದ ಊಟ ಸರಬರಾಜಾಗಿದೆ ಎಂದು ಹೇಳಿದರು.

ದೇವಸ್ಥಾನ ಆಡಳಿತ ಮಂಡಳಿ ಈ ನಡೆಯಿಂದ ಹಿಂದೂ ಸಮಾಜಕ್ಕೆ ನೋವಾಗಿದೆ ಎಂದು ಹೇಳಿದರು. ಧರ್ಮ ಸಂಸತ್ತಿಗೆ ಊಟ ನೀಡದಿರೋದು ಹಿಂದೆ ರಾಜ್ಯ ಸರ್ಕಾರದ ಪಿತೂರಿ ಇದೆ ಎಂದು ಆರೋಪಿಸಿದ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ನಿಲುವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *