Connect with us

DAKSHINA KANNADA

ತಾಕತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರಕಾರ ಭಜರಂಗದಳ ಮತ್ತು ಆರ್.ಎಸ್.ಎಸ್ ನಿಶೇಧಿಸಲಿ: ಅರುಣ್ ಕುಮಾರ್ ಪುತ್ತಿಲ

Share Information

ಪುತ್ತೂರು, ಮೇ 26: ತಾಕತ್ತಿದ್ದರೆ ರಾಜ್ಯ ಕಾಂಗ್ರೆಸ್ ಸರಕಾರ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಶೇಧಿಸಲಿ ಎಂದು ಪುತ್ತೂರು ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಚಿವ ಪ್ರಿಯಾಂಕ ಖರ್ಗೆ ಅಗತ್ಯ ಬಿದ್ದರೆ ರಾಜ್ಯದಲ್ಲಿ ಭಜರಂಗದಳ ಮತ್ತು ಆರ್.ಎಸ್.ಎಸ್ ಅನ್ನು ನಿಶೇಧ ಮಾಡುತ್ತೇವೆ. ರಾಜ್ಯದಲ್ಲಿ ಇರುವುದಾದರೆ ಇರಿ,ಇಲ್ಲಾ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಈ ರೀತಿಯಾದಲ್ಲಿ ಇಡೀ ಹಿಂದೂ ಸಮಾಜವನ್ನು ಒಟ್ಟು ಸೇರಿಸಿ ದಿಟ್ಟ ಉತ್ತರ ನೀಡಲಾಗುವುದು ಎಂದರು.

ರಾಜ್ಯ ಸರಕಾರ ತಾವು ಘೋಷಿಸಿದ ಗ್ಯಾರೆಂಟಿಗಳನ್ನು ಕೂಡಲೇ ಜನರಿಗೆ ತಲುಪಿಸುವ ಕೆಲಸ ಮಾಡಲಿ. ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಮಾಣಿಯಲ್ಲಿ ಮತ್ತು ಸುಳ್ಯದಲ್ಲಿ ಅಹಿತಕರ ಘಟನೆ ನಡೆದಿದ್ದು, ಈ ಘಟನೆಗಳನ್ನು ಖಂಡಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.


Share Information
Advertisement
Click to comment

You must be logged in to post a comment Login

Leave a Reply