Connect with us

LATEST NEWS

ಉಳ್ಳಾಲದಲ್ಲಿ ಸಚಿವ ಖಾದರ್ ಗೆ ಕಲ್ಲು ನಳಿನ್ ಗೆ ಭವ್ಯ ಸ್ವಾಗತ

ಉಳ್ಳಾಲದಲ್ಲಿ ಸಚಿವ ಖಾದರ್ ಗೆ ಕಲ್ಲು ನಳಿನ್ ಗೆ ಭವ್ಯ ಸ್ವಾಗತ

ಮಂಗಳೂರು ಅಕ್ಟೋಬರ್ 06: ಉಳ್ಳಾಲದಲ್ಲಿ ಹತ್ಯೆಗೀಡಾದ ಜುಬೇರ್ ಮನೆಗೆ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಉಳ್ಳಾಲದ ಮುಕ್ಕಚ್ಚೇರಿಯ ಕಿಲೇರಿಯಾ ನಗರದಲ್ಲಿರುವ ಜುಬೇರ್ ಮನೆಗೆ ಸಂಜೆ ಭೇಟಿ ನೀಡಿದ ಸಂಸದ ನಳಿನ್ ಕುಮಾರ್ ಕಟೀಲ್ ಜುಬೇರ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಕರ್ನಾಟಕ ಜಂಗಲ್ ರಾಜ್ ಆಗುತ್ತಿದೆ. ಅಮಾಯಕ ಜನರ ಹತ್ಯೆಯಾಗುತ್ತಿದ್ದರೂ, ರಾಜಕೀಯ ಶಕ್ತಿಗಳಿಂದ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜುಬೇರ್ ಕೊಲೆ ಪ್ರಕರಣದ ಆರೋಪಿಗಳನ್ನ ಈ ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ . ಜುಬೇರ್ ಕುಟುಂಬಕ್ಕೆ ರಾಜ್ಯ ಸರಕಾರ 40 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಖಾದರ್ ಗೆ ಕಾರಿಗೆ ಕಲ್ಲು ತೂರಾಟ 

ಈ ಮೊದಲು ಜುಬೇರ್ ಮನೆಗೆ ಭೇಟಿ ನೀಡಲು ಬಂದಿದ್ದ ಸಚಿವ ಯು.ಟಿ ಖಾದರ್ ಅವರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿದ್ದರು. ಉದ್ರಿಕ್ತರಿಂದ ಖಾದರ್ ಕಾರಿಗೆ ಕಲ್ಲು ಕೂಡ ತೂರಲಾಗಿತ್ತು.

VIDEO

Share Information
Continue Reading
Advertisement
Click to comment

Leave a Reply

Your email address will not be published. Required fields are marked *