Connect with us

    LATEST NEWS

    ಸಂಸದ ಬ್ರಿಜೇಶ್ ಚೌಟ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ – ಮಂಗಳೂರು – ಬೆಂಗಳೂರಿಗೆ ವಿಶೇಷ ರೈಲು

    ಮಂಗಳೂರು ಜುಲೈ 19 : ಮಂಗಳೂರು ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳು ಗುಡ್ಡ ಕುಸಿತದಿಂದ ಹಾನಿಯಾಗಿದ್ದು, ರಸ್ತೆ ಸಂಪರ್ಕ ಬಹುತೇಕ ಬಂದ್ ಆಗಿರುವ ಹಿನ್ನಲೆ ಸಂಸದ ಬ್ರಿಜೇಶ್ ಚೌಟ ರೈಲ್ವೆ ಇಲಾಖೆಗೆ ಮಂಗಳೂರು ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸಂಚಾರಕ್ಕೆ ಒತ್ತಾಯಿಸಿದ್ದಾರೆ. ಇದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ.


    ಮಂಗಳೂರು ಮತ್ತು ಬೆಂಗಳೂರನ್ನು ಸಂಪರ್ಕಿಸುವ ಮುಖ್ಯ ಎರಡು ರಾಷ್ಟೀಯ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಂ ಅವರಿಗೆ ಈ ಸಂಬಂಧ ಸಂಸದರು ಪತ್ರ ‌ಬರೆದಿದ್ದಾರೆ.
    ಮಂಗಳೂರು- ಬೆಂಗಳೂರು ನಗರಗಳ ನಡುವೆ ಪ್ರತಿನಿತ್ಯ ಹೆಚ್ಚು ಜನರು ಪ್ರಯಾಣಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಇತರ ಸಾರಿಗೆ ವ್ಯವಸ್ಥೆಯಿಲ್ಲದ ಕಾರಣ ಹೆಚ್ಚುವರಿ ರೈಲು ಸೇವೆಯನ್ನು ಒದಗಿಸುವ ಅಗತ್ಯವಿದೆ. ಶೀಘ್ರದಲ್ಲಿ ಹೆಚ್ಚುವರಿ ರೈಲ್ವೆ ಸೇವೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಚೌಟ ವಿನಂತಿಸಿದ್ದಾರೆ.

    ಈ ಹಿನ್ನಲೆ ಇದೀಗ ನೈಋತ್ಯ ರೈಲ್ವೆ ವಿಭಾಗ ಸಂಸದರ ಮನವಿಗೆ ಸ್ಪಂದಿಸಿದ್ದು, ಮಂಗಳೂರು ಬೆಂಗಳೂರು ಮಂಗಳೂರಿಗೆ ಹೆಚ್ಚುವರಿ ರೈಲು ಸಂಚರಿಸಲಿದೆ.

    ಟ್ರೈನ್ ನಂಬರ್ 06547/06548 ಬೆಂಗಳೂರು – ಮಂಗಳೂರು ಜಂಕ್ಷನ್ – ಯಶವಂತ ಪುರ ನಡುವೆ ರೈಲು ಸಂಚರಿಸಲಿದೆ.

    ಜುಲೈ 19 ರಂದು ಟ್ರೈನ್ ನಂಬರ್ 06547 – ಬೆಂಗಳೂರಿನಿಂದ ಮಂಗಳೂರಿಗೆ
    ಜುಲೈ 20 ರಂದು ಟ್ರೈನ್ ನಂಬರ್ 06548 – ಮಂಗಳೂರಿನಿಂದ ಯಶವಂತಪುರ ಜಂಕ್ಷನ್

    ಟ್ರೈನ್ ನಂಬರ್ 06548/06550 ಯಶವಂತಪುರ – ಮಂಗಳೂರು ಜಂಕ್ಷನ್ -ಯಶವಂತಪುರ ರೈಲು ಜುಲೈ 21 ಮತ್ತು 22 ರಂದು ಸಂಚರಿಸಲಿದೆ.

    ಜುಲೈ 21 ಮತ್ತು 22 ರಂದು ಟ್ರೈನ್ ನಂಬರ್ 06549 – ಯಶವಂತಪುರ – ಮಂಗಳೂರು ಜಂಕ್ಷನ್
    ಜುಲೈ 21 ಮತ್ತು 22 ರಂದು ಟ್ರೈನ್ ನಂಬರ್ 06550 – ಮಂಗಳೂರು ಜಂಕ್ಷನ್ – ಯಶವಂತಪುರ

    ರೈಲಿನ ಬಗ್ಗೆ ಹೆಚ್ಚಿನ ಮಾಹಿತಿಗೆ ರೈಲ್ವೆ ಇಲಾಖೆಯ ಟೋಲ್ ಫ್ರೀ ನಂಬರ್ ಗೆ ಕಾಲ್ ಮಾಡಬಹುದು.

    Share Information
    Advertisement
    Click to comment

    You must be logged in to post a comment Login

    Leave a Reply