Connect with us

LATEST NEWS

ರಸ್ತೆ ನಿಧಾನಗತಿಯ ಕಾಮಗಾರಿ ಖಂಡಿಸಿ ಡಿವೈಎಫ್ ಐ ನಿಂದ ಪ್ರತಿಭಟನೆ

ರಸ್ತೆ ನಿಧಾನಗತಿಯ ಕಾಮಗಾರಿ ಖಂಡಿಸಿ ಡಿವೈಎಫ್ ಐ ನಿಂದ ಪ್ರತಿಭಟನೆ

ಮಂಗಳೂರು ಸೆಪ್ಟೆಂಬರ್ 17: ಮಂಗಳೂರು ನಗರದ ಪಾಲಿಕೆ ವ್ಯಾಪ್ತಿಯ ಬಜಾಲ್ ಜೆ.ಎಮ್ ರೋಡ್ ನಿಂದ ಪಕ್ಕಲಡ್ಕ ದ ವರೆಗಿನ ಮುಖ್ಯರಸ್ತೆಯ ನಿಧಾನಗತಿಯ ಕಾಮಗಾರಿಯನ್ನು ಖಂಡಿಸಿ ಡಿವೈಎಫ್ ಐ ಪಕ್ಕಲಡ್ಕ ನೇತ್ರತ್ವದಲ್ಲಿ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಮಾಜಿ ಮುಖಂಡರಾದ ಸುನೀಲ್‌ ಕುಮಾರ್ ಬಜಾಲ್ ಮಾತನಾಡಿ ಸ್ಮಾರ್ಟ್ ಸಿಟಿ ಎಂಬ ಹಣೆ ಪಟ್ಟಿ ಕಟ್ಟಿ ಬೀಗುತ್ತಿರುವ ಮಂಗಳೂರು ನಗರ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ನಡೆಯುತ್ತಿರುವ ರಸ್ತೆ ಕಾಮಾಗಾರಿಗಳು ಆಮೆ ಗತಿಯಲ್ಲಿ ಸಾಗುತ್ತಿವೆ.

ಕಾಮಗಾರಿಯನ್ನು ಚುರುಕುಗೊಳಿಸಿ ತ್ವರಿತಗತಿಯಲ್ಲಿ ರಸ್ತೆ ನಿರ್ಮಾಣ ಕಾಮಾಗಾರಿ ಪೂರ್ಣಗೊಳಿಸಬೆಕೆಂದು ಆಗ್ರಹಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟ ಮಂಗಳೂರು ನಗರಪಾಲಿಕೆ ಅಧಿಕಾರಿ ಗಣಪತಿ ಅವರಿಗೆ ಮನವಿ ಸಲ್ಲಿಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *