Connect with us

DAKSHINA KANNADA

ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ – 51 ಜನ ವಶಕ್ಕೆ

ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ – 51 ಜನ ವಶಕ್ಕೆ

ಪುತ್ತೂರು ಜೂನ್ 19: ಸ್ಕಿಲ್ ಗೇಮ್ ಹೆಸರಿನಲ್ಲಿ ಜುಗಾರಿ ನಡೆಸುತ್ತಿದ್ದ ಕೇಂದ್ರವೊಂದಕ್ಕೆ ಪೋಲೀಸರು ತಡರಾತ್ರಿ ದಾಳಿ ನಡೆಸಿ ಕೇಂದ್ರದ ಸಿಬ್ಬಂದಿ ಸೇರಿದಂತೆ 51 ಜನರನ್ನು ವಶಕ್ಕೆ ಪಡೆದಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಈ ಕೇಂದ್ರ ಪುತ್ತೂರಿನ ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿತ್ತು. ಹೈಕೋರ್ಟ್ ನ ಆದೇಶವಿದೆ ಎನ್ನುವ ದಾಖಲೆಯನ್ನು ತೋರಿಸಿ ಈ ಕೇಂದ್ರದಲ್ಲಿ ರಾಜಾರೋಷವಾಗಿ ಜುಗಾರಿ ನಡೆಯುತ್ತಿತ್ತು. ಈ ವಿಚಾರವಾಗಿ ಹಿಂದೂ ಸಂಘಟನೆಗಳು ಪುತ್ತೂರು ಡಿವೈಎಸ್ಪಿ ಅವರನ್ನು ಸಂಪರ್ಕಿಸಿ ಕೇಂದ್ರವನ್ನು ಮುಚ್ಚುವಂತೆ ಮನವಿ ನೀಡಿತ್ತು. ಅಲ್ಲದೆ ಪೋಲೀಸರು ಈ ಸ್ಕಿಲ್ ಗೇಮ್ ಕೇಂದ್ರವನ್ನು ಮುಚ್ಚದೇ ಹೋದಲ್ಲಿ ಸಂಘಟನೆಗಳು ದಾಳಿ ನಡೆಸಿ ಮುಚ್ಚ್ಲಿಸಲಿವೆ ಎನ್ನುವ ಎಚ್ಚರಿಕೆಯನ್ನೂ ನೀಡಿತ್ತು‌.

ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೋಲೀಸರು ದಾಳಿ ನಡೆಸಿ ಕೇಂದ್ರದೊಳಗಿದ್ದ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌. ಈ ಹಿಂದೆಯೂ ಪುತ್ತೂರು ಎಸೈ ಒಬ್ಬರು ಈ ಕೇಂದ್ರಕ್ಕೆ ದಾಳಿ ನಡೆಸಿ ಐವರನ್ನು ಠಾಣೆಗೆ ಕರೆದು ತಂದಿದ್ದರು. ಆದರೆ ಠಾಣೆ ತಲುಪುವ ಮೊದಲೇ ಕರೆದು ತಂದ ಐವರನ್ನು ಪೋಲೀಸ್ ಜೀಪ್ ನಲ್ಲೇ ಅಡ್ಡೆ ತನಕ ತಲುಪಿಸುವಷ್ಟು ಒತ್ತಡವೂ ಬಂದಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *