DAKSHINA KANNADA
ಸಿದ್ಧರಾಮಯ್ಯರಿಗೆ ರೈತರ ಪರ ಕಾಳಜಿಯಿಲ್ಲ, ಅವರು ಕುರ್ಚಿ ಉಳಿಸುವುದರಲ್ಲಿ ನಿರತರಾಗಿದ್ದಾರೆ: ಸಂಜೀವ ಮಠಂದೂರು
ಪುತ್ತೂರು, ಸೆಪ್ಟೆಂಬರ್ 13: ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದೆ.
ನೆಲ್ಲಿಕಟ್ಟೆ ಬಸ್ ನಿಲ್ದಾಣದಿಂದ ಅಮರ್ ಜವಾನ್ ಜ್ಯೋತಿವರೆಗೆ ಮೆರವಣಿಗೆ ಮೂಲಕ ಸಾಗಿದ ಬಿಜೆಪಿ ಕಾರ್ಯಕರ್ತರು, ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಸಂಜೀವ ಮಠಂದೂರು, ಸಿದ್ಧರಾಮಯ್ಯ ಸರಕಾರ ಬಂದ ಬಳಿಕ ರಾಜ್ಯ ಬರ ಪರಿಸ್ಥಿತಿ ಎದುರಿಸುತಾಗಿದೆ, ಬರ ಘೋಷಣೆಗೆ ಸಿದ್ಧರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ. ಸಿದ್ಧರಾಮಯ್ಯರಿಗೆ ರೈತರ ಪರ ಕಾಳಜಿಯಿಲ್ಲ, ಅವರು ತಮ್ಮ ಕುರ್ಚಿ ಉಳಿಸುವುದರಲ್ಲಿ ನಿರತರಾಗಿದ್ದಾರೆ.
ಸಿಎಂ ಕುರ್ಚಿಯ ಕಾಲನ್ನು ಒಂದು ಕಡೆ ಡಿ.ಕೆ.ಶಿವಕುಮಾರ್, ಒಂದು ಕಡೆ ಬಿ.ಕೆ.ಹರಿಪ್ರಸಾದ್, ಒಂದು ಮುನಿಯಪ್ಪ, ಒಂದು ಕಡೆ ಪರಮೇಶ್ವರ್ ಹಿಡಿದುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಕುರ್ಚಿ ಬಿಟ್ಟು ಬರುತ್ತಿಲ್ಲ, ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
You must be logged in to post a comment Login